ಜೂನ್,26 #ಶಾಹು_ಮಹಾರಾಜ್_ಜನ್ಮೋತ್ಸವ
ಪ್ರೀತಿಯ ಸ್ನೇಹಿತರೆ,
ಕುಣುಬಿ ಎಂಬುದು ಮಹಾರಾಷ್ಟ ದಲ್ಲಿ ಕುರುಬರ ಒಂದು ಪಂಗಡ. ಕುರುಬರು ಪಶುಪಾಲನೆಯನ್ನು ನಿಲ್ಲಿಸಿ, ಕೃಷಿಯನ್ನು ಆರಂಭಿಸಿದಾಗ, ಇವರಿಗೆ ಕುಣುಬಿಗಳು ಅಥವಾ ಕುಡಿಒಕ್ಕಲಿಗರು ಎಂಬ ಹೆಸರು ಬಂತು.
ಮುಂದೆ ಓದಿ.
ಹಾಲುಮತ, ಕುರುಬ ಸಮಾಜದ ಹುಲಿ, ಭಾರತ ದೇಶದ ಮೊಟ್ಟ ಮೊದಲ ಮೀಸಲಾತಿ ಜನಕ, ನಮ್ಮ ಕುರುಬ ಸಮುದಾಯದ ಹೆಮ್ಮೆಯ ಪ್ರತೀಕ, ಶ್ರೀ ಶ್ರೀ ಶ್ರೀ ಛತ್ರಪತಿ ಶಾಹು ಮಹಾರಾಜರವರು ಮಹಾರಾಷ್ಟ್ರ ರಾಜ್ಯದವರು.1902ರಲ್ಲಿಯೇ ಬ್ರಾಹ್ಮಣರೇತರಿಗೆ ಶೇಕಡ 50 ಮೀಸಲಾತಿಯನ್ನು ನೀಡಿದ ಮಹಾನ್ ಪುರುಷ ನಮ್ಮ ಸಮಾಜದವರು ಎನ್ನುವುದು ಹೆಮ್ಮೆಯ ವಿಚಾರ.
*ಮೀಸಲಾತಿ ಜನಕ ಛತ್ರಪತಿ ಶಾಹು ಮಹಾರಾಜ್*.
ಮಹಾರಾಷ್ಟ್ರದಲ್ಲಿ *ಜೂನ್ 26 ಕ್ರಿ.ಶ .1874* ರಲ್ಲಿ ಇವರ ಜನನವಾಗುತ್ತದೆ. ಶೂದ್ರ ಶೂರ ಅಸ್ಪೃಶ್ಯರ ಸಂಜೀವಿನಿ, ಧೀರ ಧೀಮಂತರು ಕುಣಬಿ (ಕುರುಬರ)ಜಾತಿಯಲ್ಲಿ ಹುಟ್ಟಿದ ಭಾರತದ ಆಶಾಕಿರಣ..
ಕ್ರಿ.ಶ.1894ರಲ್ಲಿ ಕೋಲ್ಹಾಪುರದ ಮಹಾರಾಜಾರಾಗಿ ಅಧಿಕೃತವಾಗಿ ವೇದೊಕ್ತ ಶಾಸ್ತ್ರ ಪ್ರಕಾರವಾಗಿ ಪಟ್ಟಾಭಿಷೇಕ ಕಾರ್ಯಕ್ರಮ ರಾಜಪುರೋಹಿತ ಶಂಕರಾಚಾರ್ಯ(ಬ್ರಾಹ್ಮಣ) ಇವರಿಂದ ರಾಜಾಭಿಷೇಕದ ಕಾರ್ಯಕ್ರಮ ಜರುಗುವುದು. ಶಾಹು ಮಹಾರಾಜರು ಬ್ರಾಹ್ಮಣ ಸ್ನೇಹಿತನಾದ ಇವರ ಗಮನಕ್ಕೆ ಈ ರಾಜಪುರೋಹಿತ ಬ್ರಾಹ್ಮಣ ತನ್ನ ಮಂತ್ರಗಳಲ್ಲಿ ನಿನ್ನ ರಾಜ್ಯಕ್ಕೆ ತುಂಬ ಕೇಡು ಉಂಟಾಗಲಿ ಎಂದು, ನಿನ್ನ ರಾಜ್ಯವು ನಾಶವಾಗಲಿ ಎಂದು, ಮಂತ್ರಗಳನ್ನು ಹೇಳುತ್ತಿದ್ದಾನೆ ಎಂದು ಸ್ನೇಹಿತ ಶಾಹುರ ಗಮನಕ್ಕೆ ತರುತ್ತಾನೆ. ಎಲ್ಲಾ ಕಾರ್ಯಕ್ರಮ ಮುಗಿದ ಬಳಿಕ ರಾಜ ಪುರೋಹಿತರನ್ನು ಸಂಸ್ಥಾನಕ್ಕೆ ಕರೆಯಿಸಿಕೊಂಡು ವಿಚಾರಿಸುತ್ತಾನೆ. ರಾಜಪುರೋಹಿತರೆ ನಾವು ನಿಮಗೆ ಏನು ಕಡಿಮೆ ಮಾಡಿದ್ದೇವೆ. ಯಾಕೆ ನಮ್ಮ ರಾಜ್ಯದ ವಿರುದ್ಧ ಕೇಡು ಮಂತ್ರಗಳನ್ನು ಹೇಳಲು ಕಾರಣವೇನು? ಎಂದು ಕೇಳಿದಾಗ. *ಆಗ ಬ್ರಾಹ್ಮಣನಾದ ಪುರೊಹಿತ* ಹೌದು ನಾನು ನಿಜವಾಗಿಯೂ ನಿಮ್ಮ ರಾಜ್ಯದ ವಿರುದ್ಧ ಕೇಡು ಮಂತ್ರಗಳನ್ನು ಉಚ್ಚಾರಣೆಯು ಮಾಡಿದ್ದೇನೆ. ಏಕೆಂದರೆ ಒಬ್ಬ ಶೂದ್ರನಾಗಿ ನೀನು ರಾಜ್ಯಭಾರ ಮಾಡುವುದೆ ಒಂದು ಕೇಡು. ಅದರಲ್ಲಿ ಶೂದ್ರನಾದ ನೀನು ವಿದ್ಯಾಭ್ಯಾಸ ಮಾಡಿರುವುದು ಆಕ್ಷ್ಯಮ ಅಪರಾಧ ವಾಗುತ್ತದೆ. ಶೂದ್ರನಾದ ನೀನೂ ರಾಜನಾಗುವುದರಿಂದ ನಾಡಿಗೆ ಕೇಡು ಎಂದು ಆ ಬ್ರಾಹ್ಮಣ ರಾಜ ಪುರೋಹಿತ ಉದ್ಘಾರಿಸುತ್ತಾನೆ. ಇದರಿಂದ ಕೋಪಗೊಂಡು ರಾಜ ಆ ಬ್ರಾಹ್ಮಣ ನನ್ನು ಬಂಧಿಸಲು ಆದೇಶಿಸುತ್ತಾನೆ. ಈ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಾಹ್ಮಣರನನ್ನು ಬಂದಿಸಿದ ಮೊದಲ ರಾಜಾಧಿರಾಜ ಶಾಹು.
ಇದರಿಂದ ರಾಜ ತ್ರೀವ್ರವಾಗಿ ಚಿಂತನೆಗೆ ಒಳಗಾಗುತ್ತಾನೆ. ತುಂಬ ಆಘಾತಕ್ಕೆ ಒಳಗಾಗುತ್ತಾನೆ. ಮುಂದೆನೂ ಮಾಡಬೇಕು ಎಂಬ ಅಲೋಚನೆಯಲ್ಲಿ ಮುಳುಗುತ್ತಾರೆ ಶಾಹು ಮಹಾರಾಜರು. ಅಂದು ಈ ದೇಶವು 450 ಸ್ವತಂತ್ರ ರಾಜ್ಯ ಗಳಾಗಿಯೇ ವಿಂಗಡನೆಯಾಗಿ ಪರಿಪಾಲನೆಯಾಗುವ ಸಂದರ್ಭದಲ್ಲಿ ಕೋಲ್ಹಾಪುರದ ಶಾಹು ಮಹಾರಾಜರು ಈ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ತನ್ನ ಆಸ್ಥಾನದಲ್ಲಿ ಕ್ರಿ.ಶ.1902ರಲ್ಲಿ ಜುಲೈ 26 ರಂದು ಬ್ರಾಹ್ಮಣರ ತೆರವಾದ ವರ್ಗಗಳಿಗೆ ಜಾತಿಗಳಿಗೆ ಹುದ್ದೆಗಳಲ್ಲಿ ಶೇಕಡ 50 %ಮೀಸಲಾತಿಯನ್ನು ಪ್ರಕಟಿಸಿದ ಭಾರತದ ಮೀಸಲಾತಿಯ ಜನಕರು ಇವರಾಗಿದ್ದಾರೆ.
ಅಲ್ಲಿಂದ ಶಾಹು ಮಹಾರಾಜರು ತನ್ನ ಆಸ್ಥಾನದಲ್ಲಿ ಅನೇಕಾನೇಕ ಅಸ್ಪೃಶ್ಯತ ನಿವಾರಣೆ ಕಾರ್ಯಕ್ರಮ ಗಳನ್ನು ಜಾರಿಗೊಳಿಸುತ್ತಾರೆ..
ಜೈ ಛತ್ರಪತಿ ಶಾಹು ಮಹಾರಾಜ್.
ಹಾಲುಮತ ಸಮಾಜದ ಹುಲಿ, ಭಾರತ ದೇಶದ ಮೊಟ್ಟ ಮೊದಲ ಮೀಸಲಾತಿ ಜನಕ. ನಮ್ಮ ಕುರುಬ ಸಮುದಾಯದ ಹೆಮ್ಮೆಯ ಪ್ರತೀಕ ಶ್ರೀ ಶ್ರೀ ಶ್ರೀ ಛತ್ರಪತಿ ಶಾಹು ಮಹಾರಾಜರವರು 1902ರಲ್ಲಿಯೇ ಬ್ರಾಹ್ಮಣರೇತರಿಗೆ ಶೇಕಡ 50 ಮೀ ಸಲಾತಿಯನ್ನು ನೀಡಿದ ಮಹಾನ್ ಪುರುಷ ನಮ್ಮ ಸಮಾಜದವರು ಎನ್ನುವುದು. ಹೆಮ್ಮೆಯ ವಿಚಾರ.
*ಬನ್ನಿ ನಾವೆಲ್ಲರೂ ಜೂನ್ 26ರಂದು ಹೆಮ್ಮೆಯಿಂದ ಅವರ ಜನ್ಮೋತ್ಸವ ಮಾಡೋಣ. ಮೀಸಲಾತಿಗೆ ಶಕ್ತಿ ತುಂಬಿದ ಶಾಹು ಮಹಾರಾಜರ ಮಹತ್ವ ತಿಳಿಸೋಣ.*
ಕೃಪೆ: ಫೇಸ್ಬುಕ್ ಪೋಸ್ಟ್
No comments:
Post a Comment