Sunday, 26 January 2020

ಸಿಂಧೂ ನಾಗರೀಕತೆಯಲ್ಲಿ ಕುರುಬರ ಹೆಜ್ಜೆ ಗುರುತುಗಳು

ಕ್ರೈಸ್ತ ಪೂರ್ವ ದಲ್ಲಿ ಅಂದರೆ ಸುಮಾರು 5000 ವರ್ಷ ಹಿಂದಿನ  #ಸಿಂಧೂ_ನಾಗರೀಕತೆಯಲ್ಲಿ_ಕುರುಬರ_ಹೆಜ್ಜೆ ಗುರುತುಗಳು.
ಕುರುಬರ ಇತಿಹಾಸ

ಕುರುಬ ಜನಾಂಗ ಪುರಾತನವಾದ ಜನಾಂಗ.ರಾಮಾಯಣ ಮತ್ತು ಮಹಾಭಾರತ ಕಾಲದಲ್ಲಿಯೂ ಸಹ ಕುರು ವಂಶ ಮತ್ತು ಯದುವಂಶಗಳ ಪ್ರಸ್ಥ್ತಾವನೆಯಾಗಿದೆ. ಭಾರತ ಇತಿಹಾಸದ ಮೊದಲ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ ಚಂದ್ರಗುಪ್ತನು ಕುರಿಗಾಹಿಯಾಗಿದ್ದನು. ಮೌರ್ಯರ ಮೊದಲ ದೊರೆ ಚಂದ್ರಗುಪ್ತನು ಆಗಿನ ನಂದ ದೊರೆಗಳ ವಿರುದ್ದ ಸಿಡಿದ್ದೆದ್ದು ತನ್ನದೇ ಸಾಮ್ರಾಜ್ಯವನ್ನು ಚಾಣಾಕ್ಯನ ಸಹಾಯದಿಂದ ಕಟ್ಟಿದನು. ಇದರ ಗುರುತಾಗಿ ಭಾರತ ಸರ್ಕಾರವು ನವ ದೆಹಲಿಯ ಪಾರ್ಲಿಮೆಂಟ್ ಕಟ್ಟಡದ 5ನೇ ಮಹಾದ್ವಾರದ ಬಳಿ ಚಂದ್ರಗುಪ್ತನ ಪುತ್ಥಳಿಯನ್ನು ಸ್ಥಾಪನೆ ಮಾಡಿ ಅದರ ಕೆಳಗೆ ಕುರಿ ಕಾಯುವ ಹುಡುಗ ತಾನು ಕಟ್ಟಲಿರುವ ಸಾಮ್ರಾಜ್ಯದ ಬಗ್ಗೆ ಕನಸು ಕಾಣುತ್ತಿರುವುದು ಎಂದು ಬರೆಯಲಾಗಿದೆ.

ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕರಾಯರು ಕುರುಬಜನಾಂಗದವರು, ಮೊದಲಿಗೆ ಹಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್‍ರ್‍ನು ವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆÀಗೆ ಮಣಿಯದೆ ಮಲ್ಲಿಕಾಪ್‍ರ್‍ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಸಾದು ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು.ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕÀದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ.ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬಜನಾಂಗದವರು ಕಡೆÀಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ,ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು,ವೀರಪುತ್ರರೆಂದು,ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು.ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು,ವೈಷಮ್ಯವನ್ನು,ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನಹರಿಸದೆ ಈ ಜನಾಂಗದ ಪುರಾಣ,ಇತಿಹಾಸ, ಜ್ಞಾನ,ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು.

ಕರುಬ ಜನಾಂಗದವರು ತಮ್ಮ ಸಂಸ್ಕøತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕುಲ,ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ. ಹೀಗೆ ಹರಿದು ಹಂಚಿ ಹೋದ ತಮ್ಮ ಜನಾಂಗದ “ ಕುರುಬ ” ಎಂಬ ಹೆಸರು, ಆಯಾ ಪ್ರದೇಶಗಳ ಭಾಷೆಗೆ ತಕ್ಕಂತೆ ಬದಲಾಗುತ್ತಾ ಹೋಗಿದೆ. ಹಾಗೂ ಕಾಲಕ್ಕನುಗುಣವಾಗಿ ಬಂದ ಬೇರೇ ಬೇರೇ ಧರ್ಮಗಳ ಪ್ರಭಾವ ಹಾಗೂ ವಿವಿಧ ವಿದ್ಯಮಾನಗಳಿಗೆ ಅನುಗುಣವಾಗಿ “ ಕುರುಬ ” ಪದದ ಜೊತೆಗೆ ಇತರ ಪದಗಳು ಸೇರಿಕೊಂಡಿವೆ.

ಪ್ರಾಚೀನಕಾಲದಿಂದಲೂ ಕುರಿಸಾಕಾಣಿಕೆ,ಕಂಬಳಿ ತಯಾರಿಕೆಯನ್ನು ಪ್ರಧಾನ ಉದ್ಯೋಗವನ್ನಾಗಿ ಮಾಡಿಕೊಂಡು ಬಂದ ಕಾರಣದಿಂದ ಅಲೆಮಾರಿತನವನ್ನು ಮೈಗೂಡಿಸಿಕೊಂಡು, ಒಂದೆಡೆ ನೆಲೆನಿಂತು ನೆಮ್ಮದಿಯ ಸುಖ ಜೀವನಕ್ಕೆ, ಸಂಪಾದನೆಗೆ, ಆರಾಮದಾಯಕವಾದ ಜೀವನಕ್ರಮಕ್ಕೆ ಒಡ್ಡಿಕೊಳ್ಳದೆ, ಸರಳವಾದ ಮಿತ ಆಸೆ ಆಕಾಂಕ್ಷೆಗಳ ವರ್ತುಲದಲ್ಲಿ ತಮ್ಮನ್ನು ತಾವೇ ಬಂಧಿಸಿಕೊಂಡು ನಡೆಸುತ್ತಿದ್ದ ಜೀವನಕ್ರಮಕ್ಕೆ ಶಿಕ್ಷಣವೂ ಅಗತ್ಯವೆಂಬುದನ್ನು ಗಂಭೀರವಾಗಿ ಪರಿಗಣಿಸದ ಮತ್ತು ಒಂದು ವೃತ್ತಿ ಹಾಗೂ ಸಮುದಾಯಕ್ಕೆ ಸೇರಿರುವ ನಾವೆಲ್ಲರೂ ವಿಚಾರ ವಿನಿಮಯಕ್ಕಾಗಿ ಕಷ್ಟ, ಸುಖ-ದುಖಃಗಳನ್ನು ಹಂಚಿಕೊಳ್ಳುವುದಕ್ಕಾಗಿ ಒಂದೆಡೆ ಸೇರಬೇಕು ಒಂದುಗೂಡಬೇಕು ಏಂಬ ಪರಿಕಲ್ಪನೆಯೇ ಇರದಿದ್ದ ಕಾರಣದಿಂದಾಗಿ ತಮ್ಮ ತಮ್ಮ ಮೂಲಗಳನ್ನು ಹುಡುಕಿಕೊಳ್ಳುವ, ಅದರಿಂದ ಅಸ್ಮಿತ ಅಭಿಮಾನವನ್ನು ರೂಢಿಸಿಕೊಳ್ಳುವ ತಮ್ಮ ಹಿರಿಮೆ ಗರಿಮೆ ಕಲಾವಂತಿಕೆ ವೈಶಿಷ್ಟ್ಯಗಳನ್ನು ಲೋಕ್ಕಕ್ಕೆ ಪರಿಚಯಿಸುವ ಪ್ರಯತ್ನವನ್ನು ನಮ್ಮ ಪೂರ್ವಿಕರು (ಜನಾಂಗ) ಮಾಡಲಿಲ್ಲ.

ಚಾರಿತ್ರಿಕವಾಗಿ ಮತ್ತು ಸಾಂಸ್ಕøತಿಕವಾಗಿ ಕರ್ನಾಟಕದಲ್ಲಿ ಬಹುದೊಡ್ಡ ಪಾತ್ರವನ್ನು ಹೊಂದಿರುವ ಕುರುಬ ಜನಸಮುದಾಯದವರನ್ನು ಹಾಲುಮತದ ಸಂಪ್ರದಾಯದವರೆಂದು ಕರೆಯುತ್ತಾರೆ.

ಕುರುಬ ಜನಾಂಗದವರು ಅನಾದಿ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿಕೊಂಡು ಬಂದವರು, ಕಲ್ಲ್ಲಿನ ಶಿಲೆಯನ್ನು ಪೂಜಿಸುವುದು ಪುರಾತನವಾದ ಸಂಪ್ರದಾಯ,ಅದೇ ಸಂಸ್ಕøತಿ ಮುಂದೆ ಶಿವಲಿಂಗ ಪೂಜೆಯಾಗೆ ಮಾರ್ಪಟ್ಟಿತು. ಪ್ರಾಚೀನಕಾಲದಿಂದಲೂ ನಮ್ಮ ಜನಾಂಗದವರು ತಮ್ಮ ಮೂಲಗುರುವೆಂದು ಆರಾದಿಸಿಕೊಂಡು ಬಂದಿರುವ ಶ್ರೀಜಗದ್ಗುರು ರೇವಣಸಿದ್ದರಿಗೆ ಅಗ್ರಸ್ಥಾನವನ್ನು ನೀಡುತ್ತಾರೆ. ಕುರುಬ ಜನಾಂಗದವರಾದ ನಾವು ಶಿವನನ್ನು ಬೀರೆಶ್ವರ,ಮೈಲಾರಲಿಂಗ, ಮಾದೇಶ್ವರ,ಮಲ್ಲಪ್ಪ, ಮಲ್ಲಿಕಾರ್ಜುನ, ಮುಂತಾದ ಹೆಸರಿನಲ್ಲಿ ಪೂಜಿಸುತ್ತೆವೆ.ಎಲ್ಲಮ್ಮ, ಭೀಮವ್ವ, ಚೌಡಮ್ಮ ಮುಂತಾದ ಹೆಸರಿನಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತೇವೆ. ಕರ್ನಾಟಕ ಮತ್ತು ಆಂದ್ರಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಬೀರೇಶ್ವರ ಅಥವಾ ಮೈಲಾರಲಿಂಗೇಶ್ವರ ದೇವಾಲಯಗಳಿರುತ್ತದೆ ಹಾಗೂ ಈ ದೇವಾಲಯದ ಪೂಜಾರಿಗಳು (ಅರ್ಚಕರು)ಕುರುಬ ಜನಾಂಗದವರೇ ಆಗಿರುತ್ತಾರೆ.

ಕುರುಬ ಸಮುದಾಯದಲ್ಲಿ ಸಿಗುವ ಎರಡು ಪ್ರಧಾನ ಸಂಪ್ರದಾಯವೆಂದರೆ, ಒಂದು ಹತ್ತಿಕಂಕಣ ಮತ್ತೊಂದು ಉಣ್ಣೆ ಕಂಕಣ ಯಾವುದೇ ಕ್ರಮಬದ್ದ ಹಾಗೂ ಸಮಾಜಕ್ಕೆ ಉಪಯುಕ್ತವಾಗುವ ಅಲ್ಲದೆ ಮಾನವನಿಗೆ ಮಂಗಳಕರವೆನಿಸುವ ಸಂದರ್ಭದಲ್ಲಿ ನಾವು ಇಚ್ಛಾಶಕ್ತಿಯನ್ನು ತೊಡುತ್ತೇವೆ. ಆ ಇಚ್ಛಾಶಕ್ತಿಯು ಕಂಕಣಬದ್ದವಾಗಿರಬೇಕೆಂದು ಆಶಿಸುತ್ತೇವೆ, ಅದಕ್ಕೆ ಸಾಂಕೇತಿಕವಾಗಿ ಅನಾದಿ ಕಾಲದಿಂದಲೂ ನಮ್ಮ ಸಮುದಾಯದವರು ಕಂಕಣವನ್ನು ಕಟ್ಟುವ ಪದ್ದತಿಯನ್ನು ರೂಡಿಸಿಕೊಂಡಿದ್ದಾರೆ.

ನಾವು ನಮ್ಮ ಸಂಸ್ಕøತಿಯ ಮೂಲ ಸೊಗಡನ್ನು,ಪರಂಪರಾಗತ ಜೀವನ ಪದ್ದತಿಯನ್ನು ಯಥಾವತ್ತಾಗಿ ಉಳಿಸಿಕೊಂಡು ಬಂದಿದ್ದೇವೆ. ಅದೇ ರೀತಿಯಲ್ಲಿ ಮುಂದುವರೆಸುತ್ತಾ ಸಮಸ್ತ ಕುಲಭಾಂದವರೆಲ್ಲರು ಒಂದುಗೂಡಿ ಕರ್ನಾಟಕÀದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾದ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಮತ್ತೆ ಮರುಕಳಿಸುವತ್ತ ದಿಟ್ಟಹೆಜ್ಜೆಯನ್ನು ಹಾಕೋಣ.
ಕುರುಬರ ಇತಿಹಾಸ ಪರಂಪರೆ, ಭಾಗ 30

ಹಾಲುಮತ ಹುಕ್ಕಬುಕ್ಕ ಸಾಂಸ್ಕೃತಿಕ ಪ್ರತಿಷ್ಠಾನ ಬಳ್ಳಾರಿ 
ಸಾಮ್ರಾಟ ಹುಕ್ಕಬುಕ್ಕ ಅಧ್ಯಯನ ಕೇಂದ್ರ, ಶಿವಮೊಗ್ಗ

ಮಗಧ  ಮತ್ತು  ಮೌರ್ಯಸಾಮ್ರಾಜ್ಯ

                ಕ್ರಿ.ಪೂ. ೬ನೆಯ ಹಾಗೂಆನಂತರದ ಒಂದೆರಡು ಶತಮಾನಗಳಲ್ಲಿಉತ್ತರ ಭಾರತದಲ್ಲಿ ಹಲವಾರುರಾಜ್ಯಗಳೂ, ಗಣರಾಜ್ಯಗಳೂಅಸ್ತಿತ್ವದಲ್ಲಿದ್ದವು. ಭೌದ್ಧ ಸಾಹಿತ್ಯದಲ್ಲಿಹದಿನಾರು ಜನಪದ(ಸೋಲಹಮಹಾರಾಜನ್ ಪದ)ಗಳ ಉಲ್ಲೇಖವಿದೆ.ಪುರಾಣಗಳಲ್ಲೂ ಇವುಗಳ ವಿವರಗಳುಸಿಗುತ್ತವೆ. ಈ ಜನಪದಗಳು ಒಂದೇರೀತಿಯಾಗಿರಲಿಲ್ಲ. ಈ ಭಿನ್ನಮೂಲಗಳಲ್ಲಿ ಇವುಗಳ ಹೆಸರುಗಳನ್ನೂಕೊಡಲಾಗಿದೆ. ಕಾಂಬೋಜ, ಗಾಂಧಾರ,ಅಂಗ, ಆವಂತಿ, ಪೌರವ(ಅಥವಾಕುರು>ಕುರುಂಬ), ಶೂರಸೇನ, ಆಶ್ಮಕ,ಪಾಂಚಾಲ, ಕಾಶಿ, ಕೋಸಲ, ಮಗಧ,ಇಕ್ವಾಕು, ಮೈಥಿಲ, ಹೈಹಯ, ಕಲಿಂಗಮತ್ತು ವೀತಿಹೋತ್ರಗಳು ಪುರಾಣೋಕ್ತರಾಜ್ಯಗಳಾಗಿವೆ. ಇವೆಲ್ಲವೂ ಪಶುಪಾಲಕಮೂಲದ ಅರಸರಿಂದಆಳುತ್ತಿದ್ದವುಗಳೆಂದು ವಿದ್ವಾಂಸರುಅಭಿಪ್ರಾಯ ಪಡುತ್ತಾರೆ. ಇವರಉದ್ಯೋಗ ಹೈನುಗಾರಿಕೆ ಮತ್ತು ಕಂಬಳಿನೇಕಾರಿಕೆ ಉದ್ಯಮವಾಗಿತ್ತು.ಕಾಂಬೋಜ, ಗಾಂಧಾರ,ಪೌರವ(ಅಥವಾ ಕುರು>ಕುರುಂಬ),ಶೂರಸೇನ, ಆಶ್ಮಕ, ಪಾಂಚಾಲ,ಕೋಸಲ, ಮಗಧ, ಮೈಥಿಲ,ಹೈಹ(ನಾಗವಂಶ)ಯ ಇತ್ಯಾದಿಗಳುಪಶುಪಾಲಕರ ಉಪವೃತ್ತಿಗಳನ್ನುಸೂಚಿಸುವ ಹೆಸರುಗಳಾಗಿವೆ. ಅಂದುಕೇವಲ ಈ ಹದಿನಾರು ರಾಜ್ಯಗಳಷ್ಟೇಇದ್ದುವೆಂದು ಹೇಳಲಾಗದು. ಇವುಅಂದು ಪ್ರಬಲವಾಗಿದ್ದರಾಜ್ಯಗಳಾಗಿದ್ದವು. ಕ್ರಮೇಣ ಈರಾಜ್ಯಗಳು ತಮ್ಮತಮ್ಮಲ್ಲಿಕಾದಾಡತೊಡಗಿದ್ದರ ಪರಿಣಾಮವಾಗಿಕೆಲವು ಅಳಿದು ಇನ್ನು ಕೆಲವು ಬೆಳೆದವು.ಇವುಗಳಲ್ಲಿ ಅಂತಿಮವಾಗಿಪ್ರಾಬಲ್ಯವನ್ನು ಹೊಂದಿ ಹಿರಿದಾದರಾಜ್ಯವೆನ್ನಿಸಿಕೊಂಡಿದ್ದು ಮಗಧರಾಜ್ಯವಾಗಿದೆ.

ಮಗದ ಸಾಮ್ರಾಜ್ಯವನ್ನು ಒಟ್ಟು ನಾಲ್ಕುಸಂತತಿಗಳು ಆಳಿದ್ದು ಮೊದಲ ಮೂರುಸಂತತಿಗಳ ಆಡಳಿತದಲ್ಲಿ ಅದನ್ನು‘ಮೊದಲ ಮಗಧ ಸಾಮ್ರಾಜ್ಯವೆಂದುಇತಿಹಾಸದಲ್ಲಿ ಕರೆಯಲಾಗಿದೆ.

ಅ. ಹರ‍್ಯಾಂಕ      ಸಂತತಿ : ನಾಲ್ಕು ಜನರಾಜರ ಆಳ್ವಿಕೆ ನಂತರ

೧. ಬಿಂಬಸಾರ(ಕ್ರಿ.ಪೂ. ೫೪೪-೪೯೨)

೨. ಅಜಾತಶತೃ(ಕ್ರಿ.ಪೂ. ೪೯೨-೪೬೦)

೩. ಉದಯಿನ್ (ಕ್ರಿ.ಪೂ. ೪೬೦-೪೪೪)

ಬ. ಶಿಶುನಾಗ ಸಂತತಿ

ಕ. ನಂದ ಸಂತತಿ

೧. ಮಹಾಪದ್ಮನಂದ

- ಮಕ್ಕಳು, ಎಂಟು ಜನರು

ಡ. ಮೌರ್ಯ ಸಂತತಿ

೧. ಚಂದ್ರಗುಪ್ತ ಮೌರ್ಯ

೨. ಬಿಂಬಸಾರ

೩. ಅಶೋಕ (ಕ್ರಿ.ಪೂ. ೨೭೨-೨೩೨)

೪. ಬ್ರಹದ್ರಥ (ಕ್ರಿ.ಪೂ. ೨೩೨- ೧೯೫)

                ಮಗಧವನ್ನು ಆಳಿದ ಈನಾಲ್ಕೂ ಸಂತತಿಗಳು ದಕ್ಷಿಣ ಭಾರತದಲ್ಲಿ‘ವಿಜಯನಗರ ಸಾಮ್ರಾಜ್ಯ(ಕ್ರಿ.ಶ.೧೩೩೬-೧೫೬೫)ವನ್ನು ಕಟ್ಟಿ ಆಳಿದನಾಲ್ಕೂ ರಾಜಮನೆತನಗಳನ್ನುಹೋಲುತ್ತವೆ. ಮತ್ತು ಇವುಧನಗಾರರಾದ ಕುರುಬರಸಾಧನೆಗಳಾಗಿವೆ.

ಮೌರ್ಯರು : ಕುಲಮೂಲ

ಕ್ರಿ.ಪೂ. ೫೪೫-೪೪ರಲ್ಲಿ ಆಡಳಿತಕ್ಕೆಬಂದ ಮಗಧ ಸಾಮ್ರಾಜ್ಯದ ನಾಲ್ಕನೆಯಸಂತತಿಯಾಗಿ ಮೌರ್ಯವಂಶವುಅಧಿಕಾರಕ್ಕೆ ಬರುತ್ತದೆ. ಈ ವಂಶದಪ್ರಮುಖ ಅರಸರೆಂದರೆ ಚಂದ್ರಗುಪ್ತಮೌರ್ಯ, ಬಿಂಬಸಾರ ಮತ್ತುದೇವನಾಂಪ್ರಿಯ(ಕ್ರಿ.ಪೂ. ೪೯೨-೪೬೧)ಎನ್ನಿಸಿದ್ದ ಅಶೋಕಚಕ್ರವರ್ತಿಗಳಾಗಿದ್ದಾರೆ. ಮೌರ್ಯಸಂತತಿಯವರು ಆಳಿದ್ದರಿಂದ ಮಗಧಸಾಮ್ರಾಜ್ಯಕ್ಕೆ ಮೌರ್ಯಸಾಮ್ರಾಜ್ಯವೆಂದೇ ಹೆಸರಾಯಿತು.

ಪ್ರಾಚೀನ ಭಾರತದ ಪ್ರಮುಖ ಅರಸುಮನೆತನವಾದ ಮೌರ್ಯರು ಭಾರತದಬಹುಭಾಗವನ್ನು ಆಳಿದರು. ಭಾರತದಲ್ಲಿಅರಸುಮನೆತನದ ಅಡಿಪಾಯ ಮತ್ತುವ್ಯವಸ್ಥಿತ ಆಡಳಿತ ಪದ್ಧತಿ ಇವರಿಂದಲೇಪ್ರಾರಂಭವಾಯಿತೆಂದು ಹೇಳಿದರೆವಸ್ತುನಿಷ್ಟವಾಗುತ್ತದೆ. ಇವರು ಉತ್ತರದಪಾಟಲೀಪುತ್ರವನ್ನು ರಾಜಧಾನಿಯಾಗಿಮಾಡಿಕೊಂಡು ಕ್ರಿ.ಪೂ. ನಾಲ್ಕನೆಯಶತಮಾನದ ಅಂತ್ಯದಲ್ಲಿ ಆಡಳಿತಕ್ಕೆಬಂದರು. ಚಂದ್ರಗುಪ್ತಮೌರ್ಯ ಇವರಮೊದಲ ಅರಸನಾಗಿದ್ದಾನೆ.

೧. ನವನಂದರು ಬ್ರಾಹ್ಮಣರನ್ನುರಾಜ್ಯಾಡಳಿತದಿಂದ ದೂರವಿಡಲುಪ್ರಯತ್ನಿಸುತ್ತಾರೆ. ಗೌಳಿ ಕುರುಬರ ಮತ್ತುಶೂದ್ರರ ಪ್ರಬಲ ಗಣತಂತ್ರದಲ್ಲಿಮಂತ್ರಿಯಾಗಿದ್ದ ರಾಕ್ಷಸನು ಇವರಮೆದುಳಾಗಿ ಕಾರ್ಯನಿರ್ವಹಿಸುತ್ತಾನೆ.ಇದನ್ನರಿತ ಕುಟಿಲ ಬ್ರಾಹ್ಮಣ ಚಾಣಕ್ಯನುಕುರುಬ ಕುಲದಲ್ಲಿಯ‘ಮುರಾ(ಮೋರ್>ನವಿಲು)ಯೆಂಬಹೆಸರಿನ ಸಂತತಿಯವನಾದಚಂದ್ರಗುಪ್ತನೊಂದಿಗೆ ಸೇರಿಕೊಂಡುಮುಳ್ಳನ್ನು ಮುಳ್ಳಿನಿಂದಲೇ ತೆಗೆದುನಂದರನ್ನು ಪಟ್ಟದಿಂದ ಕೆಳಗೆ ಇಳಿಸಿಚಂದ್ರಗುಪ್ತನನ್ನು ಪಟ್ಟಕ್ಕೆ ತರುತ್ತಾನೆ. ‘ಮೋರ್ ಎಂಬುದುಸಂಸ್ಕೃತೀಕರಣಗೊಂಡು ಮೌರ್ಯಎಂದಾಗಿದೆ. ಇಂದಿಗೂ ಕುರುಬರಲ್ಲಿಮೋರ್, ಮುರಾ, ಮೋರೆ ಎಂಬಕುಲ(ಬೆಡಗು)ಗಳಿವೆ.

೨. ‘ಭೌದ್ಧರ ದಾಖಲೆಗಳ ಪ್ರಕಾರ ಇಡೀಭರತಖಂಡವನ್ನು ಒಂದು ಛತ್ರದಡಿತಂದು ರಾಜ್ಯವಾಳಿದ ಚಂದ್ರಗುಪ್ತನುಒಬ್ಬ ಕುರುಬನಾಗಿದ್ದಾನೆ ಎಂದು ಡಬ್ಲು.ಎಂ. ಕ್ರೂಕ್ ಹೇಳುತ್ತಾನೆ.

`Chandra Gupta who brought the whole of India under one umbrella was a Shepherd of the princely race according to Buddist annals’(Tribes and castes of the N.W.P. by W.M. Crooke B.A., Vol 1, P. 50, 1896).

೩. `The Scythian Shepherds were also called Tacshaks (Tacsha = a serphant) because they  carried on their flags a serphant. Chandragupta Mourya was a Tacshak. They reigned in Magadh for ten generations. Their kings were called Serpent Kings. ChandraGupta Maurya was a Tacshaks. The queen fled to Patliputra and there gave birth to a son who was called ChandraGupta by the Shepherd in whose fold he was born(Hindustan review, p. 519, December 1912).

೪. ಚಂದ್ರಗುಪ್ತ ಮೌರ್ಯನು ಒಬ್ಬಪ್ರಸಿದ್ಧ ಕುರುಬ ರಾಜನಾಗಿದ್ದಾನೆ.ಅವನಿಗೆ ‘ಮೌರ್ಯ ಎಂಬ ಹೆಸರುಬರಲು ಕಾರಣವಾದ ಅಂಶವನ್ನುಇತಿಹಾಸ ವಿದ್ವಾಂಸರು ನಿರ್ಧರಿಸಿ,ಒಮ್ಮತಾಭಿಪ್ರಾಯಕ್ಕೆ ಬಂದಿರುವುದಿಲ್ಲ.ಅವನ ತಾಯಿಯ ಹೆಸರು ‘ಮುರಾಎಂದಿದ್ದರಿಂದ ಬಂದಿರಬಹುದು. ಅವನಪೂರ್ವಜರು ಮೋರ್>ಮೌರಿ ಎಂಬಪರ್ವತಶ್ರೇಣಿ ಪ್ರದೇಶದ ಕುರುಬಬುಡಕಟ್ಟಿಗೆ ಸೇರಿದವರಾದ್ದರಿಂದಬಂದಿರಬಹುದು. ಅವನಿಗೆನವಿಲುಗಳೆಂದರೆ ಅಚ್ಚು ಮೆಚ್ಚಾದ್ದರಿಂದಬಂದಿರಬಹುದೆಂದೂ ಊಹೆಗಳನ್ನುಮಾಡಲಾಗುತ್ತದೆ. ಅದು ನಂತರ ಅವನವಂಶಜರ ಗೋತ್ರವಾಯಿತು. ‘ಮೋರೆಎಂಬ ಕುಲ ಕುರುಬರಲ್ಲಿದೆ.

``He was the one of the greatest kings of India. Archaeologists donot so far seem to have been able to find out the origin of the word `Maurya’. (A). Some say that the name of Chandragupta’s mother was `Mura’, hence name Maurya. (B). Some says that he was fond of seeing Peacocks , hence the name Maurya. (C). The word Maurya or Mauri is the name of the place whence he or his elders came, This name will became afterwards their `Gotras’, such as Hans,Mongolias, Hool, Hoon, maurya, Siria etc., These are the gotras of the Dhanagars and of the Rajputs’’( A Grammar of the Modern Geography by Arrowsmith. P. 330, 1844).

``In Morocco and otherbarbary states the ruling people were `Mauri’ afterwards corrupted into `Moors’. They were the most ancient race and were the ruling people of the whole country. They were Shepherds and lived a nomadic life. Moria is also the name of mountain in Syria’’( A Grammar of the Modern Geography by Arrow smith. P. 330, 1844).

೫. ಭಾರತ ಪ್ರಜಾಪ್ರಭುತ್ವದ ಪ್ರಾತಿನಿಧಿಕಸಂಸ್ಥೆಯಾಗಿ ರಾಜಧಾನಿನವದೆಹಲಿಯಲ್ಲಿ ‘ಸಂಸದ ಭವನನಿಂತಿದೆ. ಈ ಭವನದ ಮುಂದೆ ಅಂದರೆ೫ನೆಯ ಗೇಟ್‌ನಲ್ಲಿ ಒಂದುಸುಂದರವಾದ ಬಾಲಕನ ಶಿಲ್ಪ ಇದೆ.ಕೇವಲ ಚಡ್ಡಿ ಧರಿಸಿ ಒಂದು ಬಂಡೆಯಮೇಲೆ ಕೈಯಲ್ಲಿ ಚಿಕ್ಕ ಕೋಲೊಂದನ್ನುಹಿಡಿದು ಮಂಡಿಯೂರಿ ಕುಳಿತಿರುವ ಈಸುಂದರ ಬಾಲಕನ ಚಿತ್ರದ ಕೆಳಗೆ ಈರೀತಿ ಬರೆದಿದೆ.


‘`The shepherd boy, Chandragupta Mourya dreaming of the India, he wants to be create’

ಇದರ ಅರ್ಥವೆಂದರೆ,

‘ಭವ್ಯಭಾರತ ದೇಶದ ನಿರ್ಮಾಣದಕನಸನ್ನು ಕಾಣುತ್ತಿರುವ ಕುರುಬರಬಾಲಕ ಚಂದ್ರಗುಪ್ತ

ಎಂಬ ಒಕ್ಕಣಿಕೆ ಎದ್ದು ಕಾಣುತ್ತದೆ.ಇವನೇ ಭಾರತದ ಮೊದಲ ಮಹಾನ್ಸಾಮ್ರಾಜ್ಯವನ್ನು ಸ್ಥಾಪಿಸಿದ ಚಂದ್ರಗುಪ್ತಮೌರ್ಯ ಮತ್ತು ಇವನುಕುರುಬವಂಶದ ಕುಡಿ ಎಂಬುದುಹೆಮ್ಮೆಪಡುವ ವಿಚಾರವಾಗಿದೆ.

೬. ಅಶೋಕ ಚಕ್ರವರ್ತಿಯ ಕಾಲದಲ್ಲಿಭಾರತಕ್ಕೆ ಬಂದಿದ್ದ ಗ್ರೀಕ್ ದೇಶದರಾಯಭಾರಿ ತನ್ನ ರಾಜತಾಂತ್ರಿಕವರದಿಯಲ್ಲಿ ಚಂದ್ರಗುಪ್ತ ಮೌರ್ಯನುಮಹಾಭಾರತದ ಕೃಷ್ಣನ ೧೩೭ನೆಯವಂಶಜ(ತಲೆಮಾರು)ನೆಂದೂಉಲ್ಲೇಖಿಸಿದ್ದಾನೆ. ಚಂದ್ರಗುಪ್ತಮೌರ್ಯನ ಕುಲಕ್ಕೂ, ಮಹಾಭಾರತದಕೃಷ್ಣನ ಕುಲಕ್ಕೂ ಸಂಬಂಧವಿರುವುದನ್ನುಪ್ರಚಲಿತವಿರುವ ಕೃಷ್ಣನ ಭಾವಚಿತ್ರದಲ್ಲಿಕೃಷ್ಣನು ತನ್ನ ಕುಲಪ್ರತೀಕವಾದನವಿಲುಗರಿ ಇರುವುದನ್ನುಗಮನಿಸಬಹುದು.  ಪ್ರಾಚೀನ ಕಾಲದಲ್ಲಿಪ್ರತಿಯೊಬ್ಬರೂ ತಮ್ಮ ಕುಲದಸಂಕೇತಗಳನ್ನು ಧರಿಸುತ್ತಿದ್ದರು.ಆದ್ದರಿಂದ ಕೃಷ್ಣನ ಭಾವಚಿತ್ರವು ನವಿಲುಗರಿ ಇಲ್ಲದಿದ್ದರೆ ಅದುಅಪೂರ್ಣವಾಗುತ್ತದೆ. ಅವನಬಾಲ್ಯದಿಂದ ಹಿಡಿದು ಅಂತ್ಯದವರೆಗೆನವಿಲುಗರಿಯು ಅವನ ಜೊತೆಗೆಇರುತ್ತದೆ.

೭. ನಂದರ ಆಳ್ವಿಕೆಯ ಸಮಯದಲ್ಲಿಬಳಕೆಯಲ್ಲಿದ್ದ ಭಾಷೆಗೆ ‘ನಂದಭಾಷೆಎಂದು ಕರೆಯಲಾಗುತ್ತಿತ್ತು. ಇದು ಕನ್ನಡಭಾಷೆಯನ್ನು ಹೋಲುವಭಾಷೆಯಾಗಿತ್ತು ಎಂದು ಮರಾಠಿಲೇಖಕರು ಬರೆಯುತ್ತಾರೆ.

‘ನಂದಗೌಳಿಗಳಾಗಿದ್ದ ಯದು-ತುರ್ವಶರುಕನ್ನಡಕ್ಕೆ ಹತ್ತಿರದ ಭಾಷಾ ಸಂಬಂಧವನ್ನುಹೊಂದಿದ್ದರೆಂದೂ, ದ್ವಾರಕೆಯವರೆಗೆಇರುವ ಹಟ್ಟಿಕಾರರಿಗೆ ಕುಂತಲರೆಂದುಕರೆಯಲಾಗುತ್ತಿತ್ತು ಮತ್ತು ನಂದರುಕರ್ನಾಟಕದ ಗೌಳಿ ಕುರುಬರು ಎಂದುಶಂ.ಬಾ. ಜೋಶಿಯವರುಅಭಿಪ್ರಾಯಪಟ್ಟಿದ್ದಾರೆ(ಶಂ.ಬಾ. ಕೃತಿಸಂಪುಟ ೧, ಪುಟ ೩೧೦).

                ೮. ಪ್ಲೂಟಾರ್ಕನ “ಲೈಫ್ಆಫ್ ಅಲೆಕ್ಸಾಂಡರ್ ಗ್ರೇಟ್ ಗ್ರಂಥದಲ್ಲಿಈ ರೀತಿ ದಾಖಲಿಸಿದೆ. ‘ಗ್ರೀಕ್ ದೊರೆಅಲೆಕ್ಸಾಂಡರನ ಮೊದಲ ದಾಳಿಯವೇಳೆಯಲ್ಲಿ‘ಅಂದ್ರಕೂಟಸ್(ಚಂದ್ರಗುಪ್ತ)ನು ಬಹಳಚಿಕ್ಕವನಿದ್ದನು ಮತ್ತು ಅವನು ಪುರುವಿನಸೈನ್ಯದಲ್ಲಿದ್ದ. ಪುರು(ಕುರುಬ ದೊರೆ)ವುಅಲೆಕ್ಸಾಂಡರನನ್ನು ಎದುರಿಸುವಾಗಚಂದ್ರಗುಪ್ತನು ಅಲೆಕ್ಗಾಂಡರನನ್ನುಕಂಡಿರಬೇಕು. ಇದು ಕ್ರಿ.ಶ. ೩೨೭ರಲ್ಲಿನಡೆದಿರಬೇಕು(ಸೂರ್ಯನಾರಾಯಣರಾವ್.ಬಿ., ಮರೆಯಲಾಗದ ಮಹಾಸಾಮ್ರಾಜ್ಯ (ಅನು: ಬಾಲಸುಭ್ರಹ್ಮಣ್ಯ),ಕನ್ನಡ ವಿ.ವಿ. ಹಂಪಿ, ೨೦೦೦, ಪುಟ೩೬).

೯. ವಿದ್ಯಾಪ್ರಕಾಶ ತ್ಯಾಗಿ ಎಂಬವಿದ್ವಾಂಸರು ತಮ್ಮ ಇತಿಹಾಸ ಕೃತಿ‘ಮಾರ್ಟಿಯಲ್ ರೇಸಸ್ ಆಫ್ಅನ್‌ಡಿವೈಡೆಡ್ ಇಂಡಿಯಾದಲ್ಲಿವಿಜಯನಗರ ಕಟ್ಟಿದ ಹಕ್ಕರಾಯ,ಬುಕ್ಕರಾಯರು ಧನಗಾರ(ಕುರುಬರು).ಧನಗಾರ(ಕುರುಬರು) ಹೊಯ್ಸಳ,ರಾಷ್ಟ್ರಕೂಟ, ಮೌರ್ಯ, ಪಲ್ಲವ,ಮರಾಠಾ ಮೊದಲಾದ ಸಾಮ್ರಾಜ್ಯಕಟ್ಟಿದ ವೀರ ಜನಾಂಗವಾಗಿದೆ. ಇದರಜೊತೆಗೆ ಕವಿಗಳು, ದಾರ್ಶನಿಕರೂ ಆದಕನಕದಾಸರು, ಕಾಳಿದಾಸರು ಇದೇಧನಗರ್ ಜನಾಂಗಕ್ಕೆ ಸೇರಿದವರುಎಂದು ಬರೆದು ದಾಖಲಿಸಿದ್ದಾರೆ. ಅದುಈ ರೀತಿ ಇದೆ.

Prominent Dhangars(Shepherds) have been Hakkaraya and Bukkaraya, founding father of Vijayanagara Empire. Dhanagars have established the Hoysalas, Rasthrakutas, Mouryas, Pallava, Holkar, Maratha dynasties etc. In addition the poets Kalidasa and Kanakadasa were also Dhanagars(Martial races of Undivided India, Vidyaprakasha Tyagi, P205).

ಚಂದ್ರಗುಪ್ತನು ಸಕಲ ಅಧಿಕಾರವನ್ನೂತನ್ನ ಹಿಡಿತದಲ್ಲಿಯೇ ಇಟ್ಟುಕೊಂಡಿದ್ದನಿರಂಕುಶ ಪ್ರಭುವಾಗಿದ್ದನು. ಪ್ರಜೆಗಳಹಿತವೇ ತನ್ನ ಹಿತವೆಂದು ನಂಬುವಆದರ್ಶಪ್ರಾಯ ಚಕ್ರವರ್ತಿಯಾಗಿದ್ದನು.ಉತ್ಖನನಗಳು ಮೌರ್ಯರ ಕಾಲದಹಲವಾರು ಊರುಗಳನ್ನು ಪತ್ತೆಮಾಡಿವೆ. ಅವುಗಳಲ್ಲಿ ಪಾಟಲಿಪುತ್ರ,ಕೌಶಾಂಬಿ, ಉಜ್ಜಯನಿ ಮತ್ತುತಕ್ಷಶಿಲೆಗಳು ಮುಖ್ಯ ನಗರಗಳಾಗಿವೆ.

10. ನಿಜ! ಚಂದ್ರಗುಪ್ತನ ಕುಲಯಾವುದು ಎಂಬುದರ ಕುರಿತುವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.ಇದಕ್ಕಾಗಿ ಹಲವು ವಿದ್ವಾಂಸರು ತಮ್ಮವೇಆದ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ.ಯಾರು ಯಾವುದೇ ಅಭಿಪ್ರಾಯಗಳನ್ನುಪ್ರಚುರಪಡಿಸಲಿ, ಅಧ್ಯಯನವು ಅಂದಿನಕಾಲದ ಸಾಮಾಜಿಕ ರಚನೆಗಳ ಕುರಿತುಚಿಂತಿಸುತ್ತದೆ.

                ಚಂದ್ರಗುಪ್ತನ ಕಾಲವನ್ನುವಿದ್ವಾಂಸರು ಕಿ.ಪೂ. ೩ನೆಯಶತಮಾನವೆಂದು ಗುರುತಿಸಿದ್ದಾರೆ. ಈಕಾಲಘಟ್ಟದಲ್ಲಿ ಅಂದಿನ ಸಾಮಾಜಿಕಸ್ಥಿತಿಗಳನ್ನು ಅವಲೋಕಿಸಿದರೆ ನಮಗೆಪೂರ್ವಗ್ರಹಪೀಡಿತ ಬರಹಗಳಸ್ವಾರ್ಥದ ಹುನ್ನಾರ ಅರ್ಥವಾಗುತ್ತದೆ.ಚಂದ್ರಗುಪ್ತನ ಪೂರ್ವಜರು ‘ಮೋರ್ಪರ್ವತಶ್ರೇಣಿಯಿಂದ ಬಂದ ಬುಡಕಟ್ಟುಜನಾಂಗದವರಾದ್ದರಿಂದ ಅವರ ವಂಶಕ್ಕೆಮೌರ್ಯರು ಎಂಬ ಹೆಸರುಬಂದಿರುವುದಾಗಿ ಕೆಲವುಇತಿಹಾಸಕಾರರು ಹೇಳುತ್ತಾರೆ. ಇನ್ನೂಕೆಲವು ಇತಿಹಾಸಕಾರರು ಇವರದು‘ನವಿಲುಗಳನ್ನ ಸಾಕುವಪಶುಪಾಲಕ(ಕುರುಬ)ರವಂಶವಾಗಿದೆಯೆಂದೂ ವಾದಿಸುತ್ತಾರೆ.ಮತ್ತೇ ಕೆಲವರು ಚಂದ್ರಗುಪ್ತನತಾಯಿಯ ಹೆಸರು ‘ಮುರಾದೇವಿಎಂದಿದ್ದು, ಈ ವಂಶಕ್ಕೆ ಈ ಹೆಸರುಬಂದಿರುವುದಾಗಿ ಹೇಳಲಾಗುತ್ತದೆ.ಇವೆಲ್ಲ ಸಿದ್ಧಾಂತಗಳು ಬರಿ ಊಹೆಗಳೂಆಗಿರಬಹುದು.

                ಕ್ರಿ.ಪೂರ್ವ ೪-೩ನೆಯಶತಮಾನದಲ್ಲಿ ವರ್ಣ ವ್ಯವಸ್ಥೆಯುಬಲಹೀನವಾಗಿದ್ದು, ಅದಕ್ಕೆಪೂರ್ವದಲ್ಲಿದ್ದ ಕಟ್ಟುಪಾಡುಗಳುಸಡಿಲವಾಗುತ್ತ ಬಂದಿದ್ದವೆಂದು ಡಾ.ಡಿ.ಡಿ. ಕೋಸಾಂಬಿಯವರುವಾದಿಸುತ್ತಾರೆ. ವರ್ಣ ವ್ಯವಸ್ಥೆಯಪ್ರಮುಖ ವರ್ಣಗಳಾದ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ ಶೂದ್ರೆಂಬ ನಾಲ್ಕುವರ್ಗಗಳು ಅಂದಿನ ಬುಡಕಟ್ಟುಸಮುದಾಯದೊಂದಿಗೆ ವೈವಾಹಿಕಸಂಬಂಧವನ್ನು ಏರ್ಪಡಿಸಿಕೊಂಡುವರ್ಣ ಸಂಕರವನ್ನುಹುಟ್ಟುಹಾಕತೊಡಗಿದ್ದವು. ಇದರಜೊತೆಜೊತೆಗೆ ಅಂದಿನ ಪ್ರಮುಖವೃತ್ತಿಗಳಾದ ಪಶುಪಾಲನೆ, ಕೃಷಿಮುಂತಾದವುಗಳು ವೃತ್ತಿ ಮೂಲದಿಂದಜಾತಿಗಳು ಬೀಜಾಂಕುವಾಗುತ್ತಿದ್ದುದನ್ನುಜನಾಂಗೀಯ ತಜ್ಞರು ದಾಖಲಿಸಿದ್ದಾರೆ.ಅಂದಿನ ಭಾರತೀಯ ಸಮಾಜ ವರ್ಣವ್ಯವಸ್ಥೆಯನ್ನು ಕಳಚಿಕೊಂಡು ವೃತ್ತಿಆಧಾರಿತ ಜಾತಿ ವ್ಯವಸ್ಥೆಗೆಜಾರಿಹೋಗುತ್ತಿದ್ದುದು ಸತ್ಯಸಂಗತಿಯಾಗಿದೆ. ಅಂದಿನ ಜಾತಿವ್ಯವಸ್ಥೆಯನ್ನು ಮೌರ್ಯ ಜಾತಿವ್ಯವಸ್ಥೆಯೆಂದು ಸೂಚಿಸಿರುವವಿದ್ವಾಂಸರು ಈ ಕೆಳಗಿನಂತೆಅಭಿಪ್ರಾಯಪಡುತ್ತಾರೆ.

                `Cast system prevailed among Mourya Community. The greek writers like Megasthenese and Diodorus also told us about Mourya Caste system.

Indian community had the traditional fourfold heredities caste system, but the Greeks told about Seven castes which has made the scholars wonder. It is possible that the Greeks were not aware of fourfold classification or `Chturvarna’ caste system.

According to some scholars, the population of Indiaduring the Mourya Period was dvided into several castes, namely

1. The Philosophers(ತತ್ವಜ್ಞಾನಿ)              2.The Husbandries (ಬೇಸಾಯಗಾರ)

3.  The solders (ಯೋಧ)                           4. The Overseers (ಮೇಲ್ವಿಚಾರಕ)

5. The councilors(ಮಂತ್ರಿಗಳು)                 6. The Assessors (ತೆರಿಗೆ ವಶೂಲಿಗಾರರು)

7. The Shepherds(ಕುರುಬರು)                   8. The Neat Herds (ದನಗಾರ ಕುರುಬರು)

9. The Artisan (ಕಲಾವಿದರು)
 
ಇಲ್ಲಿ ಗಮನಿಸಬೇಕಾದ ಅಂಶವೆಂದರೆಇವು ವೃತ್ತಿಮೂಲದ ಮೂಲಕ ಜಾತಿವಿಭಜನೆಯ ಹಂತದಲ್ಲಿದ್ದು ಇದರಲ್ಲಿಕುರುಬ ಮತ್ತು ದನಗಾರ ಪಶುಪಾಲಕಸಮುದಾಯವು ಅತ್ಯಧಿಕಸಂಖ್ಯೆಯಲ್ಲಿದ್ದುದಾಗಿದೆ. ಆಗಿನಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿಇಂದಿನ ಬಹುತೇಕ ಜಾತಿಗಳುಜನ್ಮತಳೆದಿರಲಿಲ್ಲ ಎನ್ನಬಹುದು. ಹೌದು!ಅಂದು ಹುಟ್ಟಿರದಿದ್ದ  ಜಾತಿಗಳಲ್ಲಿ‘ಗಾಣಿಗ ಜಾತಿಯೂ ಒಂದು.

 ಡಾ. ಲಿಂಗದಹಳ್ಳಿ ಹಾಲಪ್ಪ 
ಹಾಲುಮತ ಇತಿಹಾಸ, ಸಮಾಜ ಮತ್ತು ಸಂಸ್ಕೃತಿ  ಚಿಂತಕರು 
ಶಿವಮೊಗ್ಗ 

 ಆಧಾರ :
ಕುರುಬರ ಇತಿಹಾಸ : ಭಾಗ ೧
ಲೇಖಕರು : ಡಾ. ಲಿಂಗದಹಳ್ಳಿ ಹಾಲಪ್ಪ
ಪ್ರಕಟಣೆ : ಕುರುಬರ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು
ಕಾಂಟ್ಯಾಕ್ಟ : ಕಾ.ತ.ಚಿಕ್ಕಣ್ಣ ೯೪೪೮೦೯೧೧೯೧

Wednesday, 15 January 2020

ಇಷ್ಟ ಲಿಂಗವಿಷಯವನ್ನು ವಿಮರ್ಶಿಸೊಣ

#ಇಷ್ಟಲಿಂಗವಿಷಯವನ್ನು_ವಿಮರ್ಶಿಸೊಣ

"ಇಷ್ಟಲಿಂಗಮಿದಂ ಸ್ಥೂಲಂ ಯದ್ಬಾಹ್ಯೇ ಧಾರ್ಯತೇ ತನೌ |
ಪ್ರಾಣಲಿಂಗಮಿದಂ ತು ತತ್ಸೂಕ್ಷ್ಮಂ ಯದಂತರ್ಭಾವನಾಮಯಾಮಂ ||
ಪರಾತ್ಪರಂ ತು ಯತ್ವ್ರೋಕ್ತಂ ತೃಪ್ತಿ ಲಿಂಗಂ ತದುಚ್ಯತೇ||"
ಸ್ಥೂಲದೇಹದಲ್ಲಿ ಧರಿಸುವುದೆ ಇಷ್ಟಲಿಂಗವೆಂದೂ, ಸೂಕ್ಷ್ಮ ಶರೀರದಲ್ಲಿ ಧರಿಸಲ್ಪಡುವುದೇ ಪ್ರಾಣಲಿಂಗವೆಂದೂ, ಕಾರಣಶರೀರದಲ್ಲಿ ಧರಿಸಲ್ಪಡುವುದೇ ಭಾವಲಿಂಗವೆಂದೂ ಹೇಳಿಸಿಕೊಳ್ಳುವವು. ಈ ತ್ರಿವಿಧ ಲಿಂಗಗಳಿಂದ ಬಗೆಯಾಗಿರುವ ಆಚಾರಾದಿಲಿಂಗಾಗಳ ಸ್ವರೂಪವೆಂತೆಂದರೆ;

"ಆಚಾರಲಿಂಗ ಘ್ರಾಣಾಖ್ಯಂ ಭಕ್ತಸ್ಥಲಸಮಾತ್ರಯಂ |
ನಿವೃತ್ತಿ ಕಲಯೋಪೇತಂ ಗಂಥಗ್ರಹಣಸಾಧನಂ

ಗುರುಲಿಂಗ ತು ಜಿಹ್ವಾಖ್ಯಂ ಮಹೇಶಸ್ಥಲಸಂಶ್ರಯಂ|
ಪ್ರತಿಷ್ಠಾಕಲಯೋಪೇತಂ ರಸಗ್ರಹಣಸಾಧನಂ

ಶಿವಲಿಂಗಂ ತು ನೇತ್ರಾಖ್ಯಂ ಪ್ರಸಾದಿಸ್ಥಲಸಂಶಯಂ|
ವಿದ್ಯಾಕಲಾಸಮಾಯುಕ್ತಂ ರೂಪಗ್ರಹಣಸಾಧನಂ

ತ್ವಗಾಖ್ಯಂ ಜಂಗಮಲಿಂಗಂ ಪ್ರಾಣಲಿಂಗಿಸ್ಥಲಾಶ್ರಯಂ|
ಶಾಂತ್ಯಾಖ್ಯ ಕಲಯೋಪೇತಂ ಸ್ವರ್ಶಗ್ರಹಣಸಾಧನಂ

ಪ್ರಸಾದಲಿಂಗಂ ಶ್ರೋತ್ರಾಖ್ಯಂ ಶರಣಸ್ಥಲಸಂಶ್ರಯಂ|
ಶಾಂತ್ಯತೀತಕಲೋಪೇತಂ ಶಬ್ದಗ್ರಹಣಸಾಧನಂ
ಮಾನಸಂ ತು ಮಹಾಲಿಂಗಮೈಕ್ಯಸ್ಥ ಲಸಮಾಶ್ರಯಂ|
ಶಾಂತ್ಯತೀತೋತ್ತರೋಪೇತಂ ಸರ್ವಗ್ರಹಣಸಾಧನಂ "

ಘ್ರಾಣರೂಪವಾದ ಆಚಾರಲಿಂಗವು ಭಕ್ತಸ್ಥಲವನ್ನಾಶ್ರಯಿಸಿ,ನಿವೃತ್ತಿ ಕಲಾಯುಕ್ತವಾಗಿ, ಗಂಥಗ್ರಹಣಸಾಧನವಾಗಿರುವುದು. ಘ್ರಾಣವು ಇಡಾಪಿಂಡಗಳಾನಾಡೀದ್ವಾರಾ ಪ್ರಾಣವಾಯುವಿನ ಸಂಚಾರಕ್ಕೆ ಆಸ್ರಯವಾಗಿರುವುದರಿಂದಲೂ,ದೇಹಶುದ್ದಿಗೆ ಹೇತುಭೂತವಾದ ಪ್ರಾಣಯಾಮಚರಣೆಗೆ ಸಾಧನವಾದುದರಿಂದಲೂ ಇದಕ್ಕೆ "#ಆಚಾರಲಿಂಗ" ನಾಮ ಪ್ರಪ್ತವಾಗಿದೆ.

ಜಿಹ್ವಾರೂಪವಾದ ಗುರುಲಿಂಗವು ಮಹೇಶ್ವರಸ್ಥಲವನ್ನಾಶ್ರಯಿಸಿ,ಪ್ರತಿಷ್ಠಾಕಲಾಯುಕ್ತವಾಗಿ ರಸಗ್ರಹಣಸಾಧನಬವಾಗಿರುವುದು. ಜಿಹ್ವೆಯು ಷಡಕ್ಷರಮಂತ್ರದ ಉಚ್ಚಾರಕ್ಕೆ ಸಾಧನವಾದುದರಿಂದಲೂ,ಈ ಮಾಹಾಮಂತ್ರವು ಮಂತ್ರ ಮೂರ್ತಿಯಾದ ಗುರುವಿನ ಮುಖದಿಂದ ಪ್ರಾಪ್ತವಾಗುವುದರಿಂದಲೂ ಇದಕ್ಕೆ "#ಗುರಯಲಿಂಗ" ಎಂಬ ನಾಮವು ಪ್ರಾಪ್ತವಾಗಿದೆ.

ನೇತ್ರರೂಪವಾದ ಶಿವಲಿಂಗವು ಪ್ರಸಾದಿಸ್ಥಲವನ್ನಾಶ್ರಯಿಸಿ, ವಿದ್ಯಾಕಲಾಯುಕ್ತವಾಗಿ,ರೂಪಗ್ರಹಣಸಾಧನವಾಗಿರುವುದು, ನೇತ್ರವು ತನ್ನ ಗೋಳಕದಲ್ಲಿರುವ ಶಿವಪ್ರಕಾಶದಿಂದ ಸಂಯುಕ್ತವಾಗಿ ಸಕಲರೂಪ ಪ್ರದಾರ್ಥಪ್ರಕಾಶಕ್ಕೆ ಸಾಧನವಾದುದರಿಂದ ಇದಕ್ಕೆ" #ಶಿವಲಿಂಗ "ಎಂಬ ನಾಮ ಪ್ರಾಪ್ತವಾಗಿದೆ.

ತ್ವಗ್ರೊಪವಾದ ಚರಲಿಂಗವು ಪ್ರಾಣಲಿಂಗಿಸ್ಥಲವನ್ನಾಶ್ರಯಿಸಿ.ಶಾಂತಿಕಲಾಯುಕ್ತವಾಗಿ, ಸ್ಪರ್ಶ ಗ್ರಹಣಸಾಧನವಾಗಿರುವುದು. ತ್ವಕ್ಕುವಸರ್ವಾಂಗವನ್ನು ವ್ಯಾಪಿಸಿ ಶೀತಸ್ವರ್ಶಾದಿಜ್ಞಾನಕ್ಕೆ ಸಾಧನವಾದುದರಿಂದಲೂ, ಇದು ಸಂಚರಣಶೀಲವಾದ ವಾಯುವಿನ ಅಂಗವಾಗಿರುವುದರಿಂದಲೂ ಇದಕ್ಕೆ "#ಚರಲಿಂಗ" ಎಂಬ ನಾಮ ಪ್ರಾಪ್ತವಾಗಿದೆ.

ಶ್ರೋತ್ರರೂಪವಾದ ಪ್ರಸಾದಲಿಂಗವು ಶರಣಸ್ಥಲವನ್ನಾಶ್ರಯಿಸಿ, ಶಾಂತ್ಯತೀತಕಲಾಯುಕ್ತವಾಗಿ ಶಬ್ದ ಗ್ರಹಣಸಾಧನವಾಗಿರುವುದು. ಶ್ರೋತ್ರವು ಶಬ್ದಗ್ರಹಣಕ್ಕೆ ಸಾಧನವಾದುದರಿಂದಲೂ, ನಾಸಸುನಾದ ನೀನಾದ-ಮಹಾನಾದರೂಪ ಪರಾ-ಪಶ್ಯಂತಿ-ಮಧ್ಯಮಾ ಮೈಖರೀಕ್ರಮ ದಿಂದ ಪ್ರಾಪ್ತವಾಗಿವ ಅನುಗ್ರಹರೂಪಪ್ರಸಾದಕ್ಕೆ ಹೇತುವಾಗಿರುವುದರಿಂದಲೂ ಇದಕ್ಕೆ "#ಪ್ರಸಾದಲಿಂಗ" ಎಂಬ ನಾಮವು ಪ್ರಾಪ್ತವಾಗಿದೆ.

ಮನೋರೂಪವಾದ ಮಹಾಲಿಂಗವು ಐಕ್ಯಸ್ಥಲವನ್ನಾಶ್ರಯಿಸಿ, ಶಂತ್ಯತೀತ್ತೋರಕಲಾಯುಕ್ತವಾಗಿ, ಸರ್ವಗ್ರಹಣಸಾಧನವಾಗಿರುವುದು. ಮನಸ್ಸು ಶ್ರೋತ್ರಾದೀಂದ್ರಿಯಗಳಂತೆ ಒಂದೊಂದು ವಿಷಯವನ್ನು ಗ್ರಹಿಸದೆ ಸರ್ವವಿಷಯಗಳನ್ನೂ ಗ್ರಹಿಸುವುದರಿಂದಲೂ,ಇಂದ್ರಿಯಗಳಿಗೆಲ್ಲಾ ಮಹಾರಾಜನಾಗಿರುವುದರಿಂದಲೂ ಇದಕ್ಕೆ "#ಮಹಾಲಿಂಗ" ಎಂಬ ನಾವವು ಪ್ರಾಪ್ತವಾಗಿದೆ.

 "#ದಿನಾಂಕ ೨-೪-೧೯೩೫ರಲ್ಲಿ ಮೈಸೂರು ರಾಜಧಾನಿಯ ತತ್ವಶಾಸ್ತ್ರ ಮಹಾಸಭೆಯಲ್ಲಿ ನೆರವೇರಿದ #ಶಕ್ತಿವಿಶಿಷ್ಟಾದ್ವೈತಸಿದ್ದಾಂತನಿರೂಪಣೆಯ ಇಷ್ಟಲಿಂಗ ವಿಮರ್ಶೆ."

#ಗುರುಚರಣರಜ
ನವೀನ್ ಆರ್ಯಕ್ಷತ್ರಿಯ

ಮೂಲ ಕುಂಚಿಟಿಗ ಇತಿಹಾಸ


#ಮೂಲ_ಗೊತ್ತಿಲ್ಲದ_ಕೆಲವು_ಕುಂಚಿಟಿಗರಿಗೆ_ತಿಳಿಸಿ
(ಗೌಡ ಹೆಸರು ಕೊಟ್ಟಿದ್ದು ಕುರುಬಗೌಡರು) 
ಕುಂಚ ತಗೊಂಡು ಕುಂಚಿಟಿಗರಾಗಿದ್ದು ಅವರ ಮೂಲ ಕೂಡ ಪಶು ಸಾಕಾಣಿಕೆ 
#ಶೇರ್_ಮಾಡಿ
ಕುಂಚಿಟಿಗ
ಜಲದೇನವರು 
ಬೊಪ್ಪರಾಯಗೌಡ 
ಜೈ ಬೀರಲಿಂಗೇಶ್ವರ 


ಮೂಲಪುರುಷ – ಕುರುಬಗೌಡ
#ಜಲಧಿಬೊಪ್ಪರಾಯಗೌಡ

ಕಟ್ಟೇಮನೆ – ಬೆಜ್ಜಿಹಳ್ಳಿ , ಹುಲಿಕುಂಟೆ ಹೋಬಳಿ, ಸಿರಾ ತಾಲ್ಲೂಕು.
ಮನೆದೇವರು – ಜಲಧಿಬೊಪ್ಪರಾಯ, ಬೆಜ್ಜಿಹಳ್ಳಿ, ಸಿರಾ ತಾಲ್ಲೂಕು.
ಕುಲಗುರುಗಳು- ಶ್ರೀ ಶೈಲ ಮಹಾಸ್ವಾಮಿಗಳು ಹಾಗೂ ವೃಷಬೇಂದ್ರ ಸ್ವಾಮಿಗಳು.
ಗುರುಮನೆ- ಗೋಸಿಕೆರೆ , ಚಳ್ಳಕೆರೆ ತಾಲ್ಲೂಕು.
ಗುಡಿಕಟ್ಟುಗಳು – 5
ಅಮಾವಾಸ್ಯೆ ಮನೆಗಳು- 33

ಜಲಧಿ ಕುಂಚಿಟಿಗರ ಕುಲದ ಇತಿಹಾಸ.
ಜಲಧಿಬೊಪ್ಪರಾಯರ ಇತಿಹಾಸ, ಬೆಜ್ಜಿಹಳ್ಳಿ,

ಕ್ರಿ.ಶ.1172 ನೇ ಇಸವಿ ದೆಹಲಿಯ ಸುಲ್ತಾನರ ಕಾಟಕ್ಕೆ ತಮ್ಮ ಹಾಲಿನಂತಹ ಸಮುದಾಯಕ್ಕೆ ಕಳಂಕ ಬರುತ್ತದೆ ಎನ್ನುವುದನ್ನು ತಿಳಿದು, ಹಾಗೂ ತಮ್ಮ ಕುಲಬಾಂಧವರ ಹಿತರಕ್ಷಣೆಗೆ ನಿಂತ ನಮ್ಮ ನಾಯಕರು ತಮ್ಮ ಸಂಸಾರ ಹಾಗೂ ದನಕರುಗಳ ಸಮೇತ ಕುಂಚಿಟಿಗ ಸಮುದಾಯವು ವಿಂಧ್ಯ ಪರ್ವತದಿಂದ ರಭಸದಿಂದ ದಕ್ಷಿಣ ದೇಶಕ್ಕೆ ಬರುತ್ತಿರುವಾಗ ಅವರು ರಭಸದಿಂದ ಹರಿಯುತ್ತಿರುವ ನದಿಯನ್ನ ದಾಟಿ ಹೋಗಬೇಕಾದ ಪ್ರಸಂಗ ಬಂದಿತು.
ಆಗ ಗುರುಭಕ್ತ ಸಂಪನ್ನನಾದ ಬೊಪ್ಪರಾಯನು 48 ಕುಲಗೋತ್ರದವರಿಗೂ ದಾರಿಯನ್ನು ಬಿಡುವಂತೆ ನದಿದೇವತೆಯನ್ನ ಪ್ರಾರ್ಥಿಸಿ ಆಕೆಯ ಸಂತೋಷಕ್ಕಾಗಿ ತನ್ನ ಶಿರಸ್ಸನ್ನು ಛೇದಿಸಿ ದೇವಿಗೆ ಅರ್ಪಿಸಿದನು.
ದೇವಿ ಪ್ರಸನ್ನಳಾಗಿ ಅವರಿಗೆಲ್ಲಾ ದಾರಿಯನ್ನು ಮಾಡಿಕೊಟ್ಟಳು.

ಅವನ ಭಕ್ತಿಗೆ ಮೆಚ್ಚಿ ಸಾರ್ವಾಡ ಗುರುಗಳು ಅವನ ರುಂಡ ಮುಂಡಗಳನ್ನ ಕೂಡಿಸಿ ಅವನಿಗೆ ಪ್ರಾಣಧಾನ ನೀಡಿದರು.
ಆಗ ಶಿಷ್ಯನ ಕೈಯಲ್ಲಿ ಕುಂಚ ಇದ್ದುದರಿಂದ ಶಿಷ್ಯನ ಜ್ಞಾಪಕಾರ್ಥವಾಗಿ 48 ಕುಲಕ್ಕೂ ಕುಂಚಿಟಿಗರೆಂದು ನಾಮಕರಣ ಮಾಡಿದ್ದಲ್ಲದೆ ನದಿಯನ್ನ ದಾಟಿಸಿದಕ್ಕಾಗಿ ಆತನಿಗೆ ಜಲಧಿಬೊಪ್ಪರಾಯ ನೆಂದು ನಾಮಕರಣ ಮಾಡಿದರು.

ಜಲಧಿಬೊಪ್ಪರಾಯ ನೆಂದು ನಾಮಕರಣ ಮಾಡಿರುವ ಉದ್ದೇಶ ನೀರನ್ನ ಭಾಗ ಮಾಡಿ ದಾರಿಯನ್ನ ಮಾಡಿಕೊಟ್ಟಿದ್ದರಿಂದ ನೀರಿಗೆ ಒಡೆಯನೆಂದು ಅರ್ಥದಿಂದ ಮಾಡಿರಬಹುದು.
ಏಕೆಂದರೆ ಜಲಧಿ ಎಂದರೆ ಜಲ, ಬೊಪ್ಪ ಎಂದರೆ ತಂದೆ ಎಂದು ಅರ್ಥ ಬರುತ್ತದೆ.

ಹೀಗೆ ಗುರುಗಳು ಶಿಷ್ಯರೊಡಗೂಡಿ ದಕ್ಷಿಣ ದೇಶದಲ್ಲಿ ಫಲ ವಸತಿಗಳಿಗೆ ಅನುಕೂಲಕರವಾದ ಎಡೆಗಳಲ್ಲಿ ತಮ್ಮ ಶಿಷ್ಯರೊಡನೆ ನೆಲೆಗೊಳಿಸಿ ತಾವು ಧರ್ಮಸ್ವರೂಪವನ್ನು ಜನರಿಗೆ ತಿಳಿಯಪಡಿಸಲು ನಂದನಹೊಸೂರಿನಲ್ಲಿ ಕೆಲವು ಕಾಲ ತಪಸ್ಸು ಮಾಡಿದರು.

ನಂತರ ತನ್ನ ಶಿಷ್ಯ ಜಲಧಿಬೊಪ್ಪರಾಯ ನನ್ನು ಕರೆದುಕೊಂಡು ಬಂದು ಶಾಲಿವಾಹನ ಶಕ 1173 ರಲ್ಲಿ ಶಿರಾ ತಾಲ್ಲೂಕಿನ ಬೆಜ್ಜಿಹಳ್ಳಿ ಯಲ್ಲಿ ನೆಲಸಿದರು.
ಈ ಶಿಷ್ಯನು ಜಲಧಿ ಗೋತ್ರದ ಮೂಲಪುರುಷ ಹಾಗೂ 48 ಗೋತ್ರದವರನ್ನು ಉದ್ದಾರ ಮಾಡಿದ ಮಹಾತ್ಮ.
ಅದಕ್ಕೆ ಬೆಜ್ಜಿಹಳ್ಳಿಯನ್ನ ಜಲಧಿ ಗೋತ್ರದವರ ಹಾಗೂ ಕುಂಚಿಟಿಗರ ಪುಣ್ಯಕ್ಷೇತ್ರ ವೆಂದು ಕರೆಯುತ್ತಾರೆ.

ಅಲ್ಲಿನ ಪೂಜಾರರನ್ನ ಇಂದಿನ ಸ್ಥಿತಿಗತಿ ಬಗ್ಗೆ ವಿಚಾರಿಸಿದಾಗ
ಜಲಧಿ ಗೋತ್ರದವರು 5 ಬುಡಕಟ್ಟು 33 ಅಮಾವಾಸ್ಯೆ ಮನೆಗಳನ್ನ ಮಾಡಿಕೊಂಡು ಪುಣ್ಯಕ್ಷೇತ್ರವನ್ನ ಮರೆತಿದ್ದಾರೆ. ಇಂತಹ ಪುಣ್ಯಕ್ಷೇತ್ರ ವನ್ನ ಮರೆತಿದ್ದರಿಂದ ಸದರಿ ಕ್ಷೇತ್ರವು ಹೀನಾಯ ಸ್ಥಿತಿಯಲ್ಲಿದ್ದು ಬಿದ್ದು ಹೋಗುವ ಸ್ಥಿತಿಗೆ ಬಂದಿರುತ್ತದೆ.

ಇದನ್ನ ಮನಗೊಂಡು ಈ ಹಿಂದೆ 1975 ರಲ್ಲಿ ಸ್ವಾಮಿಯ ದೇವಸ್ಥಾನದ ಕಟ್ಟಡದ ಜೀರ್ಣೋದ್ಧಾರ ಮಾಡಬೇಕೆಂದು ತಮ್ಮ ಸಮುದಾಯದ ಹಲವಾರು ಮುಖಂಡರು, ಅಣ್ಣತಮ್ಮಂದಿರು ಹಾಗೂ ಭಕ್ತಾಧಿಗಳು ಸಭೆ ಸೇರಿ ಇದ್ದ ಗೋಡೆ ಗೋಪುರಗಳನ್ನ ಕೀಳಿಸಿ ಬಯಲು ಮಾಡಿ ಈಗ್ಗೆ 42 ವರ್ಷಗಳು ಕಳೆದವು.
ಸದರಿ ಕೆಲಸವು ಅಲ್ಲಿಗೆ ಮೊಟುಕಾಗಿ ದೇವಸ್ಥಾನದ ಒಳಗಡೆ ದನಕರುಗಳು, ಕೋಳಿಗಳು, ಹಂದಿ ನಾಯಿಗಳಿಗೆ ವಾಸ ಮಾಡಲು ಅನುವುಮಾಡಿ ಕೊಟ್ಟರು ಎಂದು ತಮ್ಮ ನೋವನ್ನು ತೋಡಿಕೊಂಡರು.

ಮಾಹಿತಿ ಒದಗಿಸಿದವರು

ಪ್ರಧಾನ ಅರ್ಚಕರು, ಬೆಜ್ಜಿಹಳ್ಳಿ.
ಪೂಜಾರರು- ಮುದ್ದಪ್ಪ – 9535260387
ನಟರಾಜು- 9980322929.

ಜಲಧೇನವರ ಮನೆದೇವರುಗಳು.
1) ಅರಸೀಕೆರೆ ಗುಡಿಕಟ್ಟು – 8 ಅಮಾವಾಸ್ಯೆ
2)ಐಮಂಗಲ ಗುಡಿಕಟ್ಟು – 8 ಅಮಾವಾಸ್ಯೆ
3)ಮೊಸರುಕುಂಟೆ ಗುಡಿಕಟ್ಟು – 3 ಅಮಾವಾಸ್ಯೆ
4)ನಾದೂರು ಗುಡಿಕಟ್ಟು – 6 ಅಮಾವಾಸ್ಯೆ
5)ಗುಡ್ಡದ_ಬೇವಿನಹಳ್ಳಮ್ಮನ ಗುಡಿಕಟ್ಟು- 8 ಅಮಾವಾಸ್ಯೆ.

1)ಅರಸೀಕೆರೆ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು -8
೧) ಪಾವಗಡ ತಾಲ್ಲೂಕು ಅರಸೀಕೆರೆಯ ತಾಯಿಮುದ್ದಮ್ಮ ದೇವತೆ.

೨) ಮಡಕಸಿರಾ ತಾಲ್ಲೂಕು (ಮಾದಲೂರು ಹತ್ತಿರ) ಕೊಮರೇನಹಳ್ಳಿ ಗುರುಬೀರಲಿಂಗೇಶ್ವರ.

೩)ಪಾವಗಡ ತಾಲ್ಲೂಕು ಮರೂರು ವೀರನಾಗಪ್ಪ

೪) ಹಿರಿಯೂರು ತಾಲ್ಲೂಕು ಕುರುಬರಹಳ್ಳಿ ( ಮಾರಿಕಣಿವೆ ಹತ್ತಿರ) ಲಕ್ಷ್ಮಿ ದೇವತೆ.

೫) ಚಳ್ಳಕೆರೆ ತಾಲ್ಲೂಕು ಗೋಸಿಕೆರೆ, ದೊಡ್ಡಬೀರನಹಳ್ಳಿ ಯ ತಾಯಿಮುದ್ದಮ್ಮ ದೇವತೆ.

” ಮಾಂಗಲ್ಯ ರೂಪದಲ್ಲಿ ಬಂದ ದೇವಿ ”
ನಂಬಿದ ಭಕ್ತರಿಗೆ ಇಂಬು ನೀಡುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡಬೀರನಹಳ್ಳಿ
” ತಾಯಿ ಮದ್ದಮ್ಮ ದೇವತೆ ”

ದೊಡ್ಡಬೀರನಹಳ್ಳಿ ಯ ಗ್ರಾಮದ ದೇವತೆ
” ತಾಯಿ ಮದ್ದಮ್ಮ ದೇವತೆ ” ನಂಬಿ ಬಂದ ಭಕ್ತರನ್ನ ಕೈಬಿಡದೆ ಅಭಯ ನೀಡುತ್ತಿದ್ದಾಳೆ.

ಕುಂಚಿಟಿಗ ಸಮುದಾಯದ ಜಲಧಿಬೊಪ್ಪರಾಯನ ಕುಲ/ಗೋತ್ರದ ಜಲಧಿ ಬೆಡಗಿನವರು ಆರಾಧಿಸುವ ದೇವತೆಗೆ ದೀರ್ಘ ಇತಿಹಾಸವಿದೆ.
ಸುಮಾರು ವರ್ಷಗಳ ಹಿಂದೆ ದೊಡ್ಡಬೀರನಹಳ್ಳಿ ಗ್ರಾಮದ ಹೆಣ್ಣುಮಗಳು ತನ್ನ ಮಕ್ಕಳೊಂದಿಗೆ ದೇವಿ ಮೂಲಸ್ಥಾನದ ಅರಸೀಕೆರೆಗೆ ತೆರಳಿ ಪೂಜೆ ಮಾಡಿಸಿಕೊಂಡು ಸ್ವಗ್ರಾಮದ ಕಡೆ ಮರಳುತ್ತಾಳೆ.
ಗ್ರಾಮಕ್ಕೆ ವಾಪಸ್ಸು ಬರುವಾಗ ದಾರಿಮದ್ಯೆ ಊಟಕ್ಕೆ ಕುಳಿತಾಗ ಪ್ರಸಾದದ ಗಂಟಲ್ಲಿ ದೇವಿಯ ಮಾಂಗಲ್ಯ ಪತ್ತೆಯಾಗುತ್ತೆ. ಇದನ್ನು ಕಂಡು ಆಕೆ ಗಾಬರಿಗೊಂಡು ಅಯ್ಯೋ ದೇವಿ ಒಡವೆ ಪ್ರಸಾದದಲ್ಲಿ ಬಂದಿದೆ. ದೇವಸ್ಥಾನಕ್ಕೆ ಕೊಡೊಣೋವೆಂದು ಹಿಂದಿರುಗಿದಾಗ ಆಕೆಗೆ ಕಣ್ಣು ಕಾಣಿಸಿದಂತಾಗುತ್ತದೆ. ತಮ್ಮೂರತ್ತ ಮಾತ್ರ ಹೊರಟಾಗ ಕಣ್ಣು ಕಾಣಿಸುತ್ತದೆ. ಕೊನೆಗೆ ದೇವಸ್ಥಾನಕ್ಕೆ ಹೋಗುವ ಪ್ರಯತ್ನ ವಿಫಲಗೊಂಡು ಮಕ್ಕಳೊಂದಿಗೆ ದೊಡ್ಡಬೀರನಹಳ್ಳಿಯತ್ತ ಮರಳುತ್ತಾರೆ.

ರೈತನ ಕೈ ಸೇರಿದ ಮಾಂಗಲ್ಯ: ದೇವಿ ಮಾಂಗಲ್ಯವನ್ನು ಮನೆಯಲ್ಲಿನ ರಾಗಿ ಧಾನ್ಯದ ಕಣಜದಲ್ಲಿ ಊಣುತ್ತಾಳೆ. ಅದೇ ದಿವಸ ಹಿರಿಯೂರು ತಾಲ್ಲೂಕು ಬುರುಡುಗುಂಟೆ ಗ್ರಾಮದ ರೈತನೊಬ್ಬ ರಾಗಿಯನ್ನ ಕೊಳ್ಳಲು ಆಕೆ ಮನೆಗೆ ಬರುತ್ತಾನೆ. ಕಣಜದಲ್ಲಿದ್ದ ರಾಗಿಯನ್ನ ಅಳೆದು ಕೊಡುವ ವೇಳೆ ಮರೆತು ದೇವಿ ಮಾಂಗಲ್ಯ ರೈತರ ಬಳಿ ಸೇರುತ್ತೆ.
ಆಗ ರೈತ ಕೊಂಡ ರಾಗಿಯಲ್ಲಿ ಪತ್ತೆಯಾದ ಮಾಂಗಲ್ಯದೊಂದಿಗೆ ಆಚಾರಿಯೊಬ್ಬರ ಬಳಿ ಹೋಗಿ ಕರಗಿಸಲು ಕೊಡುತ್ತಾನೆ. ಅದು ಆಚಾರಿಯಿಂದ ಅಸಾಧ್ಯವಾಗುತ್ತದೆ.

ಮಾಯಾ ರೂಪ: ಕೊನೆಗೆ ದೇವಿ ಇದರಿಂದ ಮನನೊಂದು ನನ್ನ ಬೆಡಗಿನ ಜಲಧಿ ಭಕ್ತರು ಬುರುಡುಕುಂಟೆ ಗ್ರಾಮದಲ್ಲಿ ಅನ್ನನೀರು ಸೇವಿಸುದಾಗಲಿ, ಕೂಡುಕೊಳ್ಳುವ ಸಂಬಂಧ ಬೆಳೆಸುವುದಾಗಲಿ ಮಾಡದಂತಾಗಲಿ ಎಂದು ಶಾಪ ಹಾಕುತ್ತಾಳೆ. ಅಲ್ಲಿಂದ ದೇವಿ ಮಾಂಗಲ್ಯ ಮಾಯಾ ರೂಪತಾಳಿ ಮತ್ತೆ ದೊಡ್ಡಬೀರನಹಳ್ಳಿ ಗ್ರಾಮದ ಹೊಲ ಮರೆ ಬಳಿಯ ತುಗ್ಗಲಿ ಮರದಲ್ಲಿ ಬಂದು ಸೇರುತ್ತಾಳೆ.

ಹೀಗಿರುವಾಗ ದೊಡ್ಡಬೀರನಹಳ್ಳಿ ಗ್ರಾಮದ ಕವಳೆಹಣ್ಣು ವ್ಯಾಪಾರಿ ಅಜ್ಜಿಯೊಂದು ನಿತ್ಯ ಮಾರ್ಗವಾಗಿ ಸಂಚರಿಸುವಾಗ ತುಗ್ಗಲಿ ಮರದ ಬಳಿ ಸಾಗುವ ವೇಳೆ ನಾನು ಬರುತ್ತೇನೆ ಎಂಬ ಅಶಿರೀರವಾಣಿ ಶಬ್ದ ಕೇಳಿಸುತ್ತದೆ. ಆಗ ಅಜ್ಜಿ ಒಂದು ದಿನ ನೀನು ಯಾರು ಎಂದು ಕೇಳುತ್ತಾಳೆ ಅದಕ್ಕೆ ದೇವಿ ನಾನು ” ತಾಯಿ ಮದ್ದಮ್ಮ ದೇವಿ ” ನಿಮ್ಮೂರಿಗೆ ಬರುತ್ತೇನೆ ನನ್ನನ್ನು ಹೊಸ ಮಡಿಕೆಯಲ್ಲಿ ಇರಿಸಿಕೊಂಡು ಗ್ರಾಮಕ್ಕೆ ಕರೆದೊಯ್ಯಬೇಕು ಎಂದು ವಾಗ್ದಾನ ಕೊಡುತ್ತಾಳೆ.

ಕೂಡಲೇ ಅಜ್ಜಿ ಗ್ರಾಮದ ಮುಖ್ಯಸ್ಥರಿಗೆ ವಿಷಯ ತಿಳಿಸುತ್ತಾಳೆ. ಸುದ್ದಿ ತಿಳಿದ ಊರಿನ ಜನರು ಒಂದು ದಿನ ಭಕ್ತಿಯಿಂದ ಜಾನಪದ ವಾಧ್ಯದ ಮೂಲಕ ದೇವಿ ಹೇಳಿದ ಹಾಗೆ ನಡೆದು ದೇವಿಯನ್ನು ಊರಿಗೆ ಕರೆತಂದು ನೂತನ ಚಪ್ಪರದಡಿ ದೇವಿಯನ್ನ ಪ್ರತಿಷ್ಠಾಪಿಸುತ್ತಾರೆ.ಈಗೆ ಭಕ್ತಿಯಿಂದ ಪೂಜಿಸಿಕೊಂಡು ಜಾತ್ರೆ, ಕಾರ್ತಿಕ , ಉತ್ಸವ ಇನ್ನಿತರೆ ಧಾರ್ಮಿಕ ಕಾರ್ಯ ಕೈಗೊಳ್ಳುತ್ತಿದ್ದಾರೆ.

ಜತೆಗೆ ದೇವಿ ನುಡಿದಂತೆ ಇವತ್ತಿಗೂ ಸಹ ಬುರುಡುಕುಂಟೆ ಗ್ರಾಮದಲ್ಲಿ ಈ ದೇವರಿನ ಕುಲ/ಬೆಡಗಿವರು ಊಟ ಮಾಡುವುದಾಗಲಿ, ನೀರು ಕುಡಿಯುವುದಾಗಲಿ, ಕೂಡುಕೊಳ್ಳುವ ಸಂಬಂಧ ಬೆಳೆಸುವುದಾಗಲಿ ಮಾಡುತ್ತಿಲ್ಲ ಎನ್ನುತ್ತಾರೆ ಊರಿನ ಜಲಧಿವಂಶದ ಪ್ರಮುಖರು.

ವಿಶೇಷ ಪೂಜೆ : ಪಾವಗಡ ತಾಲ್ಲೂಕು ಮರೂರು ವೀರನಾಗಪ್ಪ , ಹಿರಿಯೂರು ತಾಲ್ಲೂಕಿನ ಬೆಜ್ಜಿಹಳ್ಳಿ ಜಲಧಿಬೊಪ್ಪರಾಯ, ನೆರೆ ಆಂದ್ರಪ್ರದೇಶದ ಮಡಕಸಿರಾ ತಾಲ್ಲೂಕು ಕೊಮರೇನಹಳ್ಳಿ ಬೀರಲಿಂಗೇಶ್ವರ, ಹೊಸದುರ್ಗ ತಾಲ್ಲೂಕು ಬೇವಿನಹಳ್ಳಿ ಗುಡ್ಡದ ಬೇವಿನಳ್ಳಮ್ಮ ದೇವಿ ಪರಿವಾರದ ದೇವರು . ಈ ದೇವರಿಗೆ ಜಲಧಿಬೆಡಗಿನ ವಂಶಸ್ಥರು ಹಬ್ಬ ಜಾತ್ರೆಗಳಲ್ಲಿ ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ.

ತಾಯಿ ಮದ್ದಮ್ಮ ದೇವಿ ಮೈಮೇಲೆ ಬಂದು ಹೇಳಿಕೆ ನೀಡುವುದಾಗಲಿ, ಹೂವು ಕೊಡುವುದಾಗಲಿ ಮಾಡಿಲ್ಲ.
ಭಕ್ತಿಯಿಂದ ನಡೆದ ಭಕ್ತರಿಗೆ ಮಾತ್ರ ಬೇಡಿದ ವರ ಕರುಣಿಸುತ್ತಾಳೆ.
ಮಾಹಿತಿ:-ತಿಪ್ಪೇಸ್ವಾಮಿ, ಅರ್ಚಕರು,

೬) ಮಡಕಸಿರಾ ತಾಲ್ಲೂಕು ಇಟ್ಟಿಗೆಹಳ್ಳಿ ರಂಗಧಾಮಸ್ವಾಮಿ
೭) ಹಿರಿಯೂರು ತಾಲ್ಲೂಕು ಕ್ಯಾತಗೊಂಡನಹಳ್ಳಿ ಲಕ್ಷ್ಮೀ ದೇವತೆ.
೮) ಚಿಕ್ಕನಾಯಕನಹಳ್ಳಿ ತಾಲೂಕು ಚೋರಚಿಕ್ಕನಹಳ್ಳಿ ತಿಮ್ಮನಹಳ್ಳಿ ಲಕ್ಷ್ಮೀ ದೇವತೆ.

ಅರಸೀಕೆರೆ ಗುಡಿಕಟ್ಟಿಗೆ ಸೇರಿದ ಬಂಡಿಗಳು.
೧) ಕುರುಬರಹಳ್ಳಿ ಬಂಡಿ.
೨) ರಾಗಲಹಳ್ಳಿ ಬಂಡಿ.
೩) ಜಂಗಮರಹಳ್ಳಿ ಬಂಡಿ.
೪) ಆರೋನಹಳ್ಳಿ ಬಂಡಿ.
೫) ಪಾವಗಡ ತಾಲ್ಲೂಕು ಮರೂರು ಬಂಡಿ
೬) ಮಧುಗಿರಿ ತಾಲ್ಲೂಕು ಸ್ವಾರಚಿಕ್ಕನಹಳ್ಳಿ
(ಲಕ್ಷ್ಮೀ ದೇವಿಪುರ)

2) ಐಮಂಗಲ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು – 8
೧) ಹಿರಿಯೂರು ತಾಲ್ಲೂಕು ಐಮಂಗಲ ಕೆಂಚಮ್ಮದೇವತೆ.
೨)ಚಳ್ಳಕೆರೆ ತಾಲ್ಲೂಕು ತೊರೆಬೀರನಹಳ್ಳಿ ಆಂಜನೇಯ ಸ್ವಾಮಿ.
೩) ಹಿರಿಯೂರು ತಾಲ್ಲೂಕು ರಂಗೇನಹಳ್ಳಿ ಲಕ್ಷ್ಮೀದೇವತೆ.
೪) ಹಿರಿಯೂರು ತಾಲ್ಲೂಕು ಕಂಬತ್ತನಹಳ್ಳಿ ಲಕ್ಷ್ಮೀದೇವತೆ.
೫) ಹಿರಿಯೂರು ತಾಲ್ಲೂಕು ನಾರಾಯಣಪುರದ ಮುಂಡದದೇವರು.
೬) ಚಳ್ಳಕೆರೆ ತಾಲ್ಲೂಕು ಜಂಪಣ್ಣನಾಯಕನ ಕೋಟೆ ಲಕ್ಷ್ಮೀ ದೇವತೆ.
೭) ಪಾವಗಡ ತಾಲ್ಲೂಕು ರಘುವನಹಳ್ಳಿ ಲಕ್ಷ್ಮೀ ದೇವತೆ.
೮) ಸಿರಾ ತಾಲ್ಲೂಕು ಬೆಜ್ಜಿಹಳ್ಳಿಯ ತುಪ್ಪದಮ್ಮ ದೇವತೆ.

3) ಮೊಸರುಕುಂಟೆ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು -3
೧) ಸಿರಾ ತಾಲ್ಲೂಕು ಮೊಸರುಕುಂಟೆ ಲಕ್ಷ್ಮೀ ದೇವತೆ.

೨) ಸಿರಾ ತಾಲ್ಲೂಕು ಭೂವನಹಳ್ಳಿಯ ಲಕ್ಷ್ಮೀ ದೇವತೆ.
೩) ಹಿರಿಯೂರು ತಾಲ್ಲೂಕು ಲಕ್ಕೇನಹಳ್ಳಿಯ ಏಳು ಮಂದಕ್ಕ ದೇವತೆ.

4) ನಾದೂರು ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು – 6
೧) ಸಿರಾ ತಾಲ್ಲೂಕಿನ ನಾದೂರು ರಾಮಲಿಂಗೇಶ್ವರ.

೨) ಮಧುಗಿರಿ ತಾಲ್ಲೂಕು ನೇರಳಕೆರೆಯ ಹತ್ತಿರ ವೀರಾಪುರದ ಏಳುಮಂದಕ್ಕ ದೇವಿ.
೩) ಸಿರಾ ತಾಲ್ಲೂಕು ಚಿಗದಾಸರಹಳ್ಳಿಯ ಬೇಟೆರಾಯಸ್ವಾಮಿ.
೪) ಸಿರಾ ತಾಲ್ಲೂಕು ಚಿನ್ನಪ್ಪನಹಳ್ಳಿ ಲಕ್ಷ್ಮೀ ದೇವತೆ‌.
೫) ಸಿರಾ ತಾಲ್ಲೂಕು ಮುಷ್ಟಿಗರಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ.

ನಾದೂರು ಗುಡಿಕಟ್ಟಿಗೆ ಸೇರಿದ ಬಂಡಿಗಳು.
೧) ಸಿರಾ ತಾಲ್ಲೂಕು ಕೆರೆಯಾಗಲಹಳ್ಳಿ ಬಂಡಿ, ಬಂಡಿಕಾರರು ಎ.ರಾಮಕೃಷ್ಣಪ್ಪ.
೨) ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಬಂಡಿ.
ಬಂಡಿಕಾರರು BR ಜಗದೀಶ್.
೩) ಮಧುಗಿರಿ ತಾಲ್ಲೂಕು ನೇರಳಹಳ್ಳಿ ಬಂಡಿ.
ಬಂಡಿಕಾರರು ರಾಜಣ್ಣ
೪) ಮಧುಗಿರಿ ತಾಲ್ಲೂಕು ವೀರಾಪುರದ ಬಂಡಿ.
ಬಂಡಿಕಾರರು ಶ್ರೀ ಜಯರಾಮಯ್ಯ ಕಾಮಣ್ಣ.
೫)ಮಧುಗಿರಿ ತಾಲ್ಲೂಕು ವೀರಾಪುರದ ಬಂಡಿ.
ಬಂಡಿಕಾರರು ವಿ.ಜೆ.ರಮೇಶ್.
೬)ಮಡಕಸಿರಾ ತಾಲ್ಲೂಕು ಪೇಲುಬಂಡೆ ಬಂಡಿ.
ಬಂಡಿಕಾರರು ಶ್ರೀ ದೊಡ್ಡಯ್ಯ.
೭) ಮಡಕಸಿರಾ ತಾಲ್ಲೂಕು ಅಗ್ರಹಾರ ಬಂಡಿ .
ಬಂಡಿಕಾರರು ಶ್ರೀ ರಮೇಶ್.

5) ಗುಡ್ಡದ_ಬೇವಿನಹಳ್ಳಿ ಗುಡಿಕಟ್ಟಿಗೆ ಸೇರಿದ ಅಮಾವಾಸ್ಯೆ ದೇವರುಗಳು- 8)
೧) ಹೊಸದುರ್ಗ ತಾಲ್ಲೂಕು ಬೇವಿನಹಳ್ಳಿಯ ಬೇವಿನಳ್ಳಮ್ಮ

ಹೊಸದಾಗಿ ನಿರ್ಮಾಣವಾಗುತ್ತಿರುವ ದೇವಾಲಯ

೨) ಸಿರಾ ತಾಲ್ಲೂಕು ನಾರಾಯಣಪುರದ ನಾರಾಯಣಸ್ವಾಮಿ.

೩) ಚಳ್ಳಕೆರೆ ತಾಲ್ಲೂಕು ಅಲ್ಲಿಪುರ ಲಕ್ಕಮ್ಮ ದೇವಿ.
೪) ಸಿರಾ ತಾಲ್ಲೂಕು ಭೂತಕಾಟನಹಳ್ಳಿಯ ಲಕ್ಷ್ಮೀ ದೇವತೆ.
೫) ಸಿರಾ ತಾಲ್ಲೂಕು ಬಡಕನಹಳ್ಳಿ ಲಕ್ಷ್ಮೀ ದೇವತೆ.
೬)ಹಿರಿಯೂರು ತಾಲ್ಲೂಕು ಬೋರನಕುಂಟೆ ಲಕ್ಷ್ಮೀ ದೇವತೆ.
೭) ಚಳ್ಳಕೆರೆ ತಾಲ್ಲೂಕು ಹಳಗೊಂಡನಹಳ್ಳಿ ಲಕ್ಷ್ಮೀದೇವತೆ.
೮) ಸಿರಾ ತಾಲ್ಲೂಕು ಉಜ್ಜನಕುಂಟೆ ಲಕ್ಷ್ಮೀ ದೇವತೆ.

ಸಿರಾ ತಾಲ್ಲೂಕು ತಾವರೆಕೆರೆ ಬಂಡಿರಂಗನಾಥಸ್ವಾಮಿ.

ಸಿರಾ ತಾಲ್ಲೂಕು ದೊಡ್ಡನಹಳ್ಳಿ ಬೇವಿನಳ್ಳಮ್ಮ ದೇವಿ.
ಮಧುಗಿರಿ ತಾಲ್ಲೂಕು ಸ್ವಾರಚಿಕ್ಕನಹಳ್ಳಿಯ ಲಕ್ಷ್ಮೀ ದೇವತೆ‌.

ಮಧುಗಿರಿ ತಾಲ್ಲೂಕು ಚಂಬೇನಹಳ್ಳಿಯ ಬೇವಿನಳ್ಳಮ್ಮ ದೇವತೆ.
ಮಧುಗಿರಿ ತಾಲ್ಲೂಕು ಬಡವನಹಳ್ಳಿ ಲಕ್ಷ್ಮೀ ರಂಗನಾಥಸ್ವಾಮಿ.
ಚಿಕ್ಕನಾಯಕನಹಳ್ಳಿ ತಾಲೂಕು ಕಾರೇಹಳ್ಳಿ ರಂಗನಾಥಸ್ವಾಮಿ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಲಕ್ಕೇನಹಳ್ಳಿ ಲಕ್ಕಮ್ಮ ದೇವಿ.
ಹಿರಿಯೂರು ತಾಲ್ಲೂಕು ಕೂನಿಕೆರೆ ಲಕ್ಷ್ಮೀ ನರಸಿಂಹಸ್ವಾಮಿ.
ಹಿರಿಯೂರು ತಾಲ್ಲೂಕು ಓಬಳಾಪುರದ ಲಕ್ಷ್ಮೀ ದೇವರು

ಜಲದೇನವರ ಮೂಲ ಪುರುಷ ಶ್ರೀ ಶ್ರೀ ಶ್ರೀ ಜಲಧಿ ಬೊಪ್ಪರಾಯಸ್ವಾಮಿ ಗುರುವಾದ ಶ್ರೀ ಶ್ರೀಶ್ರೀ ಗುರು ಬೀರಲಿಂಗೇಶ್ವರ ಸ್ವಾಮಿ ಯ ಜಾತ್ರಾ ಮಹೋತ್ಸವದ ಫೋಟೋಗಳು

ಕೃಪೆ: ಪಾಶುಪತ ಹಾಲುಮತ

ಶ್ರೀಬೀರೇಶ್ವರ ಚರಿತ್ರೆ

#ಶ್ರೀ_ಬೀರೇಶ್ವರ_ಚರಿತ್ರೆ
(ವೀರಭದ್ರ ಚರಿತ್ರೆ) 

(ಪ್ರಮಾಣ ಸ್ಕಂದ ಪುರಾಣ ಅಗಸ್ತ್ಯ ಸಂಹಿತೆಯ ೬೬ನೇ ಅಧ್ಯಾಯ ೧೦ನೇ ಶ್ಲೋಕ)

                                || ಶ್ಲೋಕ||

ಪುರ ಕೈಲಾಸ ಶಿಖರೇ| ದೈತ್ಯೋಭೂತ್ಕೂರ ರಾಕ್ಷಸಃ|
ಪಾರ್ವತೀಂಚ ತಪಸ್ತಪ್ತ್ವ| ವದಂತೀ ಭೇತಿ ದಾರುಣಂ|
ತೇನ ಮತ್ತೋವಜಗತ್ಸರ್ವ| ಬಾಧಯಾ ಮಾಸ ರಾಕ್ಷಸಃ|
ತದ್ಬಾಧಾ ಶರ್ಮನಾರ್ಥಂ ವೈ | ವೀರಭದ್ರೊವ ಶಿವಾಕೃತಿಃ|
ವೀರೇಶ್ವರ ಯತಿ ಖ್ಯಾತಃ| ಕೌರಭೋ ಭೂತ್ಮ ಹಾಶಯಃ|
ತಮೇವ ದೇವತಾಂ ಕೃತ್ವಾ| ಕೌರಬಾ ಭಕ್ತಿ ತತ್ವರಾಃ|
ಅರ್ಚಯಂತಿ ಮಹಾತ್ಮಾನಂ| ಬೀರೇಶ್ವರವಮಹಾತ್ಮನಂ||

#ಭಿಲ್ಲಾಸುರನನ_ಜನನ

 ವಿಭಾಗ ಗೋತ್ರದಲ್ಲಿ ಮಂದಾರನೆಂಬ ಮಹಾಮಹಿಮನಿಂದ ಕೈಲಾಸ ಶಿಖರದಲ್ಲಿ ಭಿಲ್ಲಾಸುರ ದೈತ್ಯನು ಹುಟ್ಟಿದನು. ಇವನು ಬಲ್ಲಿದನಾಗಿ ತ್ರಿಜಗವನ್ನ ತಾನೇ ಆಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಗಿರಿಜಾದೇವಿಯನ್ನು ಕುರಿತು ಅನ್ನ ನೀರುಗಳಿಲ್ಲದೆ ಏಕನಿಷ್ಠೆಯಿಂದ ತಪಸ್ಸು ಮಾಡಿದನು.ಆಗ ಪಾರ್ವತಾದೇವಿ ಅವನ ತಪಸ್ಸಿಗೆ ಮೆಚ್ಚಿಬೇನು ವರವ ಬೇಡುತ್ತೀ ಬೇಡು ಎಂದು ಅನ್ನಲು  ಆಗ ಅಸುರನು ದೇವೀವಂಗೆ ಸುರರು,ನರರು,ರಾಕ್ಷಸರು,ಇವರುಗಳಿಂದ ಮರಣವಾಗಬಾರದು ಎಂದೂ ಪರಮೇಶ್ವರನ ಪ್ರತಿಬಿಂಬದಿಂದಲೇ ನನಗೆಚಮರಣವಾಗಬೇಕು ಎಂದೂ ಬೇಡಿಕೊಂಡನು.ಅದಕ್ಕೆ ಆದೇವಿಯು ಹಾಗೇ ಆಗಲೆಂದು ವರವನ್ನು  ಕೊಟ್ಟು ಮಾಯವಾದಳು.

 #ಭಿಲ್ಲಾಸುರ_ರಾಕ್ಷಸನ_ದಿಗ್ವಿಜಯ

ದೇವಿಯ ವರದಿಂದ ಮದೋನ್ಮತ್ತನಾಗಿ ಅಟ್ಟಹಾಸದಿಂದ ಭಿಲ್ಲಾಸುರನು ಅಲೆದಾಡುತ್ತಾ ತನಗೆ ಸರಿಯಾದ ವೀರರು ಯಾರು ಇರುವರೆಂದು ಹುಡುಕಹತ್ತಿದನು. 
ಆದರೆ ಅವನಿಗೆ ಅಂಥ ವೀರರು ಒಬ್ಬರು ಸಿಗದಾದರು. ಆಗ ಸೂರ್ಯ,ಚಂದ್ರ,ವಾಯು,ವರುಣ,ಕುಬೇರ,ಕಾಲ,ಯಮ,ದಿಕ್ಪಾಲಕರು ಮೊದಲಾದ ಯಾವತ್ತು ಅಧಿಕಾರಿಗಳನ್ನು ಕಿತ್ತೊಗೆದು ದೇವ,ಯಕ್ಷ,ಗಂಧರ್ವ,ನರ,ಕಿನ್ನರ ಮೊದಲಾದವರನ್ನು ತನ್ನ ಬಾಹು‌ಬಲದಿಂದ ಗೆದ್ದು ಅಮರನಾಗಿ ಮೆರೆಯುತಿದ್ದನು. ಉಳಿದ ರಾಕ್ಷಸರು ಧರ್ಮವು ನಿರ್ಮೂಲವಾಗುವಂತೆ ವೇದೋಕ್ತ ವ್ಯವಹಾರಗಳನ್ನು ಕೆಡಿಸುತ್ತಾ ಸಾಗಿದರು . ಆಕಳುಗಳು ಬ್ರಾಹ್ಮಣರು ಇರುವಂಥ ಊರುಗಳನ್ನು ಪಟ್ಟಣಗಳನ್ನು ಹಾಳು ಮಾಡತಿದ್ದರು.
ಸದಾಚಾರಕ್ಕೆ ಎಲ್ಲಿಯೂ ಆಸ್ಪದವು ದೊರೆಯದಾಯಿತು. ದೇವತೆಗಳು ,ಬ್ರಾಹ್ಮಣರು,ಗುರುಗಳು ಇವರನ್ನು ಯಾರೂ ಮನ್ನಿಸದಾದರು. ಹರಿ-ಹರ ಭಕ್ತಿ,ಯಜ್ಞ, ಜಪ, ದಾನ ಇವು ಎಲ್ಲಿಯೂ ಉಳುಲಿಲ್ಲ. ವೇದಗಳು, ಪುರಾಣಗಳು ಕನಸಿನಲ್ಲಿಯೂ ಕಿವಿಗೆ ಬೀಳದಾದವು. ಜಗತ್ತಿನ ತುಂಬ ಭ್ರಷ್ಠಾಚಾರವಾಗಿ ಧರ್ಮದ ಹೆಸರು ಉಳಿಯದಂತಾಯಿತು.
ದುಷ್ಟ ರಾಕ್ಷಸರ ಭಯಂಕರ ಅನೀತಿಯ ಕೃತಿಗಳನ್ನು ವರ್ಣಿಸುವುದು ಶಕ್ಯವಿಲ್ಲ. ಹಿಂಸೆಯು ಅತ್ಯಂತ ಪ್ರಿಯವಾಗಿದ್ದರಿಂದ ಪಾಪ ಕೃತ್ಯಗಳಿಗೆ ಮಿತಿ ಉಳಿಯಲಿಲ್ಲ.
ಈ ಪ್ರಕಾರ ಭಿಲ್ಲಾಸುರನು ಸುರಲೋಕದಲ್ಲಿ ದಾಳಿ ಇಡಲು ಅವನ ಶೌರ್ಯಕ್ಕೆ ಯಾರೂ ನಿಲ್ಲದೆ, ಯಾವತ್ತೂ ದೇವತೆಗಳು ಇಂದ್ರ,ಅಗ್ನಿ,ಯಮ,ಹರಿ,ಬ್ರಹ್ಮಾದಿಗಳು ಹೆದರಿ ಶ್ರೀ ಶಂಕರನಿಗೆ ಮೊರೆ ಇಡಲು ಬೇಡಿಕೊಂಡರು

#ವೀರೇಶ್ವರನ_ಜನನ

ಶ್ರೀ ಶಂಕರನು ಎಲ್ಲಾ ಸಂಗತಿ ವಿಚಾರಿಸಿ ಕೋಪಾರೂಡನಾಗಿ ವೀರಭದ್ರನ ಮುಖವ ನೋಡಿದನು. ಶಿವನ ಕೋಪ ತೇಜಾಂಶವು ವೀರೇಶನ ರೂಪಾಗಿ ಈಶನ  ಮುಂದೆ ನಿಂತನು ಆವೇಶದಿಂದ ವೀರೇಶನಿಗೆ ಭಿಲ್ಲಾಸುರ ರಾಕ್ಷಸನನ್ನು ಕೊಂದು ಬೀರೇಶ್ವರನಾಗೆಂದು ವರವಿತ್ತನು‌ ಆಗ ವೀರೇಶನು ತನ್ನ ಸತಿಯಾದ ಭದ್ರಕಾಳಿಗೆ ನೀನು ಕವಳೇಶ್ವರಿ ಎಂಬ ನಾಮವನ್ನು ಧರಿಸಿಕೊಂಡು ನನ್ನ ಸಂಗಡ ಬರಬೇಕೆಂದು ಆಜ್ಞೆ ಮಾಡಿದನು. ಆಗ ಭದ್ರಕಾಳಿಯು ಪತಿಯಾಜ್ಞೆಯಂತೆ ಕವಳೇಶ್ವರಿ ಎಂಬ ನಾಮವನ್ನು ಧರಿಸಿದಳು. ಆಗ ವೀರೇಶ್ವ ಕವಳೇಶ್ವರಿಯವರು ಕೊಪಾರೂಡರಾಗಿ ಭಿಲ್ಲಾಸುರ ರಾಕ್ಷಸನನ್ಬು ಸಂಹಾರ ಮಾಡಲಿಕ್ಕೆ ಹೊರಟರು......,...,

ನವೀನ್ ಆರ್ಯ ಕ್ಷತ್ರಿಯ

ಮಿಷನ್ 50

ಅತಿಹೆಚ್ಚಿನ ಸಂಖ್ಯೆಯಲ್ಲಿ  ಕುರುಬ ಮತದಾರರನ್ನ ಹೊಂದಿರುವ  ವಿಧಾನಸಭಾ ಕ್ಷೇತ್ರಗಳು
1.ಬಾದಾಮಿ
2.ಕೊಪ್ಪಳ 
3.ಕುಷ್ಠಗಿ
4.ಸಿಂದಗಿ
5.ರಾಣೆಬೆನ್ನೂರು.
6.ರೋಣ
8.ಗುರ್ಮಿಟ್ಕಲ್
9.ರಾಮದುರ್ಗಾ
10.ಇಂಡಿ
11 ಮುದ್ದೇಬಿಹಾಳ
12ಕುಂದಗೋಳ
13.ಹರಿಹರ
14.ಅರಭಾವಿ
15.ಬಾಗಲಕೋಟೆ.
16.ಸಿಂದನೂರು
17.ಬೀದರ್ ದಕ್ಷಿಣ 
18.ಜೇವರ್ಗಿ
20. ವರುಣಾ
21.ಪಿರಿಯಾಪಟ್ಟಣ
22.ಹೊಸಕೋಟೆ
23.ಕಡೂರು
24.ತರಿಕೆರೆ
25.ನರಗುಂದ
26.ಬೀಳಗಿ
27.ನಿಪ್ಪಾಣಿ
28.ಚಿಕ್ಕೋಡಿ
29.ಬ್ಯಾಡಗಿ.
30.ನವಲಗುಂದ.
31.ವಿಜಯನಗರ
32.ಅಫಜಲ್ಪುರ
33.ಶಹಾಪೂರ.
34.ಕೆ.ಆರ್.ನಗರ
35.ಚಿಕ್ಕನಾಯಕನಹಳ್ಳಿ.
36.ಶಿಗ್ಗಾಂವ್ 
37.ಗೋಕಾಕ್ 
38.ಗಂಗಾವತಿ
39.ಯಲ್ಬುರ್ಗಾ
40.ತೇರದಾಳ.
 41.ಯಾದಗಿರಿ
42. ಗೋವಿಂದರಾಜನಗರ
43. ವಿಜಯನಗರ (ಬೆಂಗಳೂರು)
44. ಗೌರಿಬಿದನೂರು.
45. ಹುಣಸೂರು
46. ದೊಡ್ಡಬಳ್ಳಾಪುರ.
47. ಮಾಲೂರು.
48. ಶಿರಾ
49. ನಾಗಮಂಗಲ
50. ಹನೂರು
51.ಅರಕಲಗೂಡು
52.ಹೊಳೆನರಸೀಪುರ
53. ಅರಸೀಕೆರೆ.
54. ಯಶವಂತಪುರ
55. ಕೆ ಆರ್ ಪುರ.
56.ಹೊಸದುರ್ಗ.
57. ಹೊನ್ನಾಳಿ.
58. ತಿಪಟೂರು
59. ಬಬಲೇಶ್ವರ
60.ಹುನಗುಂದ
61. ಚಿಕ್ಕಮಗಳೂರು
62.ಬಸವನಬಾಗೇವಾಡಿ
63. ಬಸವಕಲ್ಯಾಣ.

ಅತಿಹೆಚ್ಚು ಕುರುಬ  ಮತದಾರರನ್ನು ಹೊಂದಿರುವ  ಪರಿಶಿಷ್ಟ ಜಾತಿ,ಪಂಗಡದ ವಿಧಾನ ಸಭಾ ಕ್ಷೇತ್ರಗಳು
1.ಹೂವಿನಹಡಗಲಿ
2.ಶಿರಹಟ್ಟಿ
3.ಕನಕಗಿರಿ
4.ರಾಯಬಾಗ್
5.ಕುಡುಚಿ
6.ಚಡಚಣ
7.ಮುಧೋಳ
8.ಲಿಂಗಸಗೂರು
9.ಹಗರಿಬೊಮ್ಮನಹಳ್ಳಿ.
10.ಹಾವೇರಿ
11.ಶಿರಗುಪ್ಪ
12.ಕೂಡ್ಲಿಗಿ
13ಸುರುಪುರ
14.ದೇವದುರ್ಗಾ
15. ಕೊರಟಗೆರೆ
16.ಬಳ್ಳಾರಿ ಗ್ರಾಮೀಣ
17.ಮಸ್ಕಿ.
18. ಸಕಲೇಶಪುರ
19 ಮಹದೇವಪುರ
20 ಮಳವಳ್ಳಿ.

ಹಾಲುಮತ ಸಮಾಜ ಗೆಲ್ಲಬಹುದಾದ ಲೋಕಸಭಾ ಕ್ಷೇತ್ರಗಳು

1. ಬೆಳಗಾವಿ
2. ಮೈಸೂರು
3. ಬಾಗಲಕೋಟೆ
4. ಕೊಪ್ಪಳ
5. ದಾವಣಗೆರೆ
6. ಧಾರವಾಡ
7. ಹಾಸನ

ಇನ್ನೂ ಹಾಲುಮತ ಸಮಾಜದ ಮತಗಳು ನಿರ್ಣಾಯಕವಾಗಿರುವ ಲೋಕಸಭಾ ಕ್ಷೇತ್ರಗಳು

1. ಹಾವೇರಿ
2. ಮಂಡ್ಯ
3. ತುಮಕೂರು
4. ಚಿಕ್ಕಮಗಳೂರು
5. ಕಲ್ಬುರ್ಗಿ
6. ರಾಯಚೂರು
7. ಬೀದರ್
8. ಬೆಂಗಳೂರು ದಕ್ಷಿಣ
9. ಬೆಂಗಳೂರು ಕೇಂದ್ರ
10. ಚಿಕ್ಕಬಳ್ಳಾಪುರ


ಇಡೀ ಭಾರತ ಖಂಡದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಂಪ್ರದಾಯಿಕವಾಗಿ ಏಕತಾ ಹಿನ್ನೆಲೆಯನ್ನು  ಹೊಂದಿರುವ ಏಕೈಕ ಜನಾಂಗ ಹಾಲುಮತ ಸಮಾಜ, ಈ ಆಧಾರದಲ್ಲಿ ಹಾಲುಮತ ಸಮಾಜ ಬಹುತೇಕ ಭಾರತದ ಎಲ್ಲಾ ರಾಜ್ಯಗಳಲ್ಲೂ ಪ್ರಮುಖ ಮತ್ತು ನಿರ್ಣಾಯಕ ಸ್ಥಾನದಲ್ಲಿದೆ
ಆದರೆ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯವನ್ನು ಹೊಂದುವುದರಲ್ಲಿ ವಿಫಲವಾಗಿದೆ. ವೈಫಲ್ಯತೆಯ ಕಾರಣಗಳನ್ನು ಹುಡುಕುತ್ತಾ ಹೋದಾಗ  ಸಹಜವಾಗಿ ಕಂಡಂತಹ ಸಂಗತಿಗಳೆಂದರೆ ಸಮನ್ವಯತೆ ಕೊರತೆ, ಶೈಕ್ಷಣಿಕ ಹಿನ್ನೆಡೆ,ಸಾಂಘಿಕ ಸಂಘಟನಾ ಲೋಪ ಮತ್ತು ಭಾರತದಾದ್ಯಂತ ಸಮಾಜ ಏಕ ವರ್ಗಿಕೃತವಾಗದೆಯಿರುವುದು ಒಟ್ಟಾರೆ ಈ ಎಲ್ಲಾ ಕಾರಣಗಳಿಂದಾಗಿ ನಿರೀಕ್ಷಿತ ಸಾಧನೆಗೈಯಲು  ಸಾಧ್ಯವಾಗಿಲ್ಲ.
ಈ ಎಲ್ಲಾ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ, ಉದ್ದೇಶಿತ ಗುರಿಯನ್ನು  ಸಾಧಿಸಬಹುದು.


ವೀರಪಾಂಡ್ಯ ಕಟ್ಟಬೊಮ್ಮನ್



ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ನೀಡಿದ ಮಹಾನ್ ಹೋರಾಟಗಾರರಲ್ಲಿ ಒಬ್ಬರಾದ ವೀರಪಾಂಡ್ಯ ಕಟ್ಟಬೊಮ್ಮನ್ 1760 ವರ್ಷದ ಜನವರಿ 3ರಂದು ಜನನ ಪಾಂಚಾಲಂಕುರುಚ್ಚಿ ಎಂಬಲ್ಲಿ ಜನಿಸಿದರು.

ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಆಗಮಿಸಿ ತನ್ನ ಬೇರು ಬಿಡಲು ಆರಂಭಿಸಿದ ದಿನಗಳಲ್ಲೇ ಅವರ ವಿರುದ್ಧ ಸಿಡಿದೆದ್ದು ಅವರಿಗೆ ಸೆಡ್ಡು ಹೊಡೆದು ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್. ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಯೂರಿದ ತಕ್ಷಣ ತಮ್ಮ ದಬ್ಬಾಳಿಕೆಯನ್ನು ಆರಂಭಿಸಿದರು. ಸಣ್ಣ ಪುಟ್ಟ ರಾಜರುಗಳಿಗೆ ಕಿರುಕುಳ ನೀಡುತ್ತಾ ಅಧಿಕಾರ ಚಲಾಯಿಸಲು ಶುರುಮಾಡಿದರು. ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರು. ಅವರ ಕಿರುಕುಳ ಸಹಿಸಲಾರದ ಬಹು ಮಂದಿ ರಾಜರುಗಳು ಅವರ ಅಡಿಯಾಳುಗಳಾದರು. ಆದರೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾಂಚಾಲಂಕುರುಚ್ಚಿಯ ಪಾಳೆಯಗಾರರಾಗಿದ್ದ ವೀರಪಾಂಡ್ಯ ಕಟ್ಟಬೊಮ್ಮನ್ ಮಾತ್ರ ಅವರೆದುರು ಬಗ್ಗಲಿಲ್ಲ. 

ಪಾಂಚಾಲಂಕುರುಚ್ಚಿಯ ಸುತ್ತಮುತ್ತಲಿನ ಪ್ರದೇಶಕ್ಕೆ ಮ್ಯಾಕ್ಸ್ವೆಲ್ ಎಂಬಾತ ಆಗಿನ ಕಂಪೆನಿಯ ಅಧಿಕಾರಿಯಾಗಿದ್ದ. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಲು ಹಲವು ಬಾರಿ ನೋಟೀಸ್ ಕಳಿಸಿದರೂ ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಮಾತ್ರಾ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದನ್ನರಿತ ಮ್ಯಾಕ್ಸ್ವೆಲ್ ವೀರಪಾಂಡ್ಯ ಕಟ್ಟಬೊಮ್ಮನ್  ಅವರಿಗೆ ಹಲವಾರು ಬೆದರಿಕೆ ಪತ್ರಗಳನ್ನು ಬರೆದ. ‘ಕಪ್ಪ ಸಲ್ಲಿಸಿ, ಇಲ್ಲದಿದ್ದರೆ ಯುದ್ಧಕ್ಕೆ ಬರುತ್ತೇವೆ’ ಎಂದು ಹೆದರಿಸಿದ. ‘ನಾವೀ ಮಣ್ಣಿನ ಮಕ್ಕಳು. ಇದು ನಮ್ಮ ಭೂಮಿತಾಯಿ. ನಾವು ಘನತೆ ಗೌರವಗಳಿಂದ ಬಾಳುವವರು. ನಮ್ಮ ಭೂಮಿಯ ಮರ್ಯಾದೆಯ ಸಲುವಾಗಿ ನಾವು ಪ್ರಾಣನೀಡುವೆವೇ ಹೊರತು ವಿದೇಶಿ ಶತ್ರುಗಳಿಗೆ ತಲೆಬಾಗುವುದಿಲ್ಲ. ಬನ್ನಿ ಹೋರಾಡೋಣ’ ಎಂದು ವೀರಪಾಂಡ್ಯ ಯುದ್ಧಕ್ಕೆ ಆಹ್ವಾನ ನೀಡಿದರು.

ಸಹಜವಾಗಿಯೇ ಎಲ್ಲವನ್ನೂ ತಮ್ಮದು ಎಂದು ದರ್ಪದಿಂದ ನಿರ್ಧರಿಸಿಕೊಂಡುಬಿಟ್ಟಿದ್ದ  ಕಂಪೆನಿಯವರಿಗೆ ವೀರಪಾಂಡ್ಯ ಕಟ್ಟಬೊಮ್ಮನ್ ಅವರ ರೀತಿ ಸರಿತೋರಲಿಲ್ಲ. 1792 ರಿಂದ 1798 ರ ವರೆಗೆ ಅವರು ಆರುವರ್ಷಗಳ ಕಾಲ  ವೀರಪಾಂಡ್ಯ ಕಟ್ಟಬೊಮ್ಮನ್  ಅವರ ಜತೆ ಸೆಣಸಾಡಿದರು.  ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಮಾತ್ರ ಬಗ್ಗಲಿಲ್ಲ. ಹಲವರು ಅವನ ಮನವೊಲಿಸಲು ಪ್ರಯತ್ನ ಮಾಡಿದರೆ “ವ್ಯಾಪಾರಿಗಳ ವೇಷದಲ್ಲಿ ಬಂದು ನಮ್ಮನ್ನು ಹೀರುತ್ತಿರುವ ಹೇಡಿ ಆಂಗ್ಲರಿಗೆ ನಾವು ಗುಲಾಮರಾಗುವುದೇ? ಎಂದಿಗೂ ಇಲ್ಲ” ಎಂದು ಅವರಿಗೆ ಬುದ್ಧಿ ಹೇಳಿದರು ಬೊಮ್ಮನ್. 

ಯಾವುದೇ ಬೆದರಿಕೆಗೂ ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಬಗ್ಗದೆ ಹೋದಾಗ ಬ್ರಿಟಿಷರು ಸಂಧಿಗೆ ಕರೆದರು. ಸಂಧಿಯ ನೆಪದಲ್ಲಿ ಬಂಧಿಸುವ ಬ್ರಿಟಿಷರ ಕುತಂತ್ರ ಅರಿತಿದ್ದ ವೀರಪಾಂಡ್ಯ ಅವರ ತಾಣಕ್ಕೇ ಹೋಗಿ ಬಂಧಿಸಲು ಬಂದ ಬ್ರಿಟಿಷರ ಅಧಿಕಾರಿಗಳ ತಲೆಕತ್ತರಿಸಿ ಉತ್ತರ ಕೊಟ್ಟು ಬಂದರು. 1799ರ ಸೆಪ್ಟೆಂಬರ್ 5ರಂದು ಬ್ರಿಟಿಷ್ ಸೈನ್ಯ ವೀರಪಾಂಡ್ಯ ಕಟ್ಟಬೊಮ್ಮನ್ ಅವರ ಪಾಂಚಾಲಂಕುರುಚ್ಚಿಯ ಮೇಲೆ ಆಕ್ರಮಣ ಮಾಡಿತು. ಬ್ರಿಟಿಷರ ಬಲಾಢ್ಯ ಪಡೆಯೆದುರು ವೀರಪಾಂಡ್ಯ ವೀರಾವೇಶದಿಂದ ಹೋರಾಡಿದರು.ಬ್ರಿಟಿಷರ ಸೈನ್ಯದೆದುರು ವೀರಪಾಂಡ್ಯರಿಗೆ ಸೋಲಾದರೂ ಆತ ಸಿಗದೇ ತಪ್ಪಿಸಿಕೊಂಡರು. 

ಪುದುಕೋಟೆಯ ರಾಜ ವಿಜಯ ರಘುನಾಥ ತೋಂಡೈಮಾನ್ ಬ್ರಿಟಿಷರ ಆಮಿಷಕ್ಕೊಳಗಾಗಿ ವೀರಪಾಂಡ್ಯ ಕಟ್ಟಬೊಮ್ಮನ್ ಅವರನ್ನು ಬಂಧಿಸಲು ಸಹಾಯ ಮಾಡಿದ. 1799ರ ಸೆಪ್ಟೆಂಬರ್ 24ರಂದು ಅವರನ್ನು ಬಂಧಿಸಲಾಯಿತು. 

ವಿಚಾರಣೆಯ ಸಮಯದಲ್ಲಿಯೂ ಮಹಾ ಪರಾಕ್ರಮಿಯಾದ  ವೀರಪಾಂಡ್ಯ ಕಟ್ಟಬೊಮ್ಮನ್ ಬ್ರಿಟಿಷರನ್ನು ಕುರಿತು "ನೀವು ಅನೈತಿಕವಾಗಿ, ಅನ್ಯಾಯವಾಗಿ ನಮ್ಮ ಭೂಮಿಯನ್ನು ಆಕ್ರಮಿಸಿದ್ದೀರಿ. ನೀವು ಇಲ್ಲಿಂದ ತೊಲಗಬೇಕು. ನಾನು ತಲೆಬಾಗಲಾರೆ. ಏನು ಬೇಕಾದರೂ ಮಾಡಿಕೊಳ್ಳಿರಿ" ಎಂದು ಗರ್ಜಿಸಿದ. ವಿದೇಶಿ ವೈರಿಗೆ ತಲೆಬಾಗದ ಆ ಸ್ವಾಭಿಮಾನಿ ದೇಶಭಕ್ತರನ್ನು ಕಯಾತ್ತಾರ್ನ ಎಂಬಲ್ಲಿ ಒಂದು ಹುಣಿಸೆಮರಕ್ಕೆ 1799ರ ಅಕ್ಟೋಬರ್ 16ರಂದು ಸಾರ್ವಜನಿಕರ ಮುಂದೆ ಬಹಿರಂಗವಾಗಿ ನೇಣು ಹಾಕಲಾಯಿತು.  

ವೀರಪಾಂಡ್ಯ ಕಟ್ಟಬೊಮ್ಮನ್ ಅವರು ಮುಂದಿನ ಸ್ವಾತಂತ್ರ್ಯದ ಕನಸಿನ ಚಿಗುರೊಡೆಯುವಿಕೆಗೆ ಹಾಕಿಕೊಟ್ಟ ಭದ್ರಬುನಾದಿಯು ಮರೆಯುವಂತದ್ದಲ್ಲ.

ಕಂಬಳಿ ಹುಟ್ಟಿದ ಪ್ರಸಂಗ

ಕಂಬಳಿ ಹುಟ್ಟಿದ ಪ್ರಸಂಗ ☜☆☞☜☆☞☜☆☞☜☆☞ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ಸ್ವಾಮಿ ನಮ್ಮಯ ಗುರುವು ಬಂದಾನ ಬನ್ನಿರೇ  ಸ್ವಾಮಿ ನಮ್ಮಯ ರೇವಣನು ಬಂದಾನ ...